ಮತ್ತ ಬಂತು ಶ್ರಾವಣಾ

ಬಸವರಾಜ್ ಕಂಟಿ

ele

ಮತ್ತ ಬಂತು ಶ್ರಾವಣಾ
ಹುರುಪಾತು ಮನಿ-ಮನಾ
ಮುಗಲಾಗ ಮಾಡ ಮೆರೆಯಾಕತ್ತು
ಚಿಗುರಿದ ಹಸುರು ನಗಲಾಕತ್ತು

ಮನಸಿನ ಬ್ಯಾಸರಕಿ ಕಳದ್ಹೋತು
ವಲ್ಲದ ಆಶಾಡ ಮುಗದ್ಹೋತು
ತಡದಿದ್ದ ಕೆಲಸ ಸುರುಆದುವು
ಮಂಗಳ ಗಳಿಗೆ ಮೊದಲಾದುವು

ರುಚಿ ಇತ್ತು ಪಂಚಮಿ ಉಂಡಿ ಬಲು
ಎರದಾಗಿತ್ತು ನಾಗಪ್ಪಗ ಹಾಲು
ಅಡಗಿಮನ್ಯಾಗ ಅಕ್ಕ-ತಂಗ್ಯಾರ ವಟವಟ ನಡದಿತ್ತು
ಅಂಗಳದಾಗ ಜೋಕಾಲಿ ಜೋರಿಲೆ ತೂಗತಿತ್ತು

ಸಾಲು ಸಾಲು ಹಬ್ಬಗಳ ಹಿಗ್ಗ ನೋಡ್ರಿ
ನಾ ಹೆಚ್ಚು ನೀ ಹೆಚ್ಚು ಅಂತ ನಿಂತಾವ್ರಿ
ಮುನ್ನುಡಿ ಬರದ ಪಂಚಮಿ ಅಂತಂತ್ರಿ
ನಾ ಮುಂದ ಮುಂದ ಹೋಗ್ತಿನಿ-
ನೀವ್ ಹಿಂದ್ ಹಿಂದ್ ಬರ್ರಿ

(ಚಿತ್ರ: www.avadhimag.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಬಸವರಾಜ್ ಕಂಟಿ ಅವರೆ…ಚೆನ್ನಾಗಿದೆ ನಿಮ್ ಪದ್ಯ :).

ಅನಿಸಿಕೆ ಬರೆಯಿರಿ:

%d bloggers like this: