ಕಲಿಕಾ ಮಾದ್ಯಮದ ಪ್ರಕರಣ ಮತ್ತು ಸಂವಿದಾನದ ಹುಳುಕು

– ಕಿರಣ್ ಬಾಟ್ನಿ.

Gavel

ಒಂದರಿಂದ ನಾಲ್ಕನೆಯ ತರಗತಿಯವರೆಗಿನ ಕಲಿಕೆ ತಾಯ್ನುಡಿಯಲ್ಲಿ ಮಾತ್ರ ಇರಬೇಕೆಂಬ ಕರ‍್ನಾಟಕ ಸರ‍್ಕಾರದ ಕಾನೂನನ್ನು ಸುಪ್ರೀಂ ಕೋರ‍್ಟ್ ತಳ್ಳಿ ಹಾಕಿದೆ. ಯಾವುದೇ ಪ್ರಜಾಪ್ರಬುತ್ವದಲ್ಲಿ ಯಾವ ಒಬ್ಬನೂ ಮತ್ತೊ­ಬ್ಬನ ಮೇಲೆ ತನ್ನ ತೀರ‍್ಮಾನಗಳನ್ನು ಹೇರುವಂತಿಲ್ಲ. ಆಯ್ಕೆಯ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವಂತಿಲ್ಲ. ಆದ್ದರಿಂದ ಕರ‍್ನಾಟಕ ಸರ‍್ಕಾರವೂ ಈ ವಿಶಯದಲ್ಲಿ ತನ್ನ ತೀರ‍್ಮಾನ­ವನ್ನು ಹೇರುವಂತಿಲ್ಲ ಎಂಬುದು ಕೋರ‍್ಟ್ ತೀರ‍್ಪಿನ ಒಟ್ಟಾರೆ ಸಾರಾಂಶ. ನ್ಯಾಯಾಲಯದ ಈ ತೀರ‍್ಪಿನಲ್ಲಿ ಹಲವು ಸಮಸ್ಯೆಗಳಿವೆ.

ಮೊದಲಿಗೆ ಬಾರತ ಎಂಬುದು ‘ಒಂದು’ ಪ್ರಜಾಪ್ರಬುತ್ವ­ವಲ್ಲ. ಅದು ಹಾಗೆಂದು ಕರೆದುಕೊಳ್ಳುತ್ತದೆ ಎಂಬುದು ನಿಜ­ವಾದರೂ ವಾಸ್ತವದಲ್ಲಿ ಬಾರತ ಕೇವಲ ‘ಒಂದು’ ದೇಶವಲ್ಲ. ಇಲ್ಲಿ ಕನ್ನಡಿಗರು, ಮರಾಟಿಗರು, ತಮಿಳರು, ನಾಗಾ ಜನಗಳು, ಹಿಂದಿಯವರು ಹೀಗೆ ಹಲವರನ್ನು ಪ್ರತಿನಿದಿಸುವ ರಾಜ್ಯಗಳಿವೆ. ಹೀಗೆ ಬೇರೆ ಬೇರೆ ನುಡಿ ಜನಾಂಗದವರೆಲ್ಲಾ ಬೇರೆ ಬೇರೆಯೇ. ಇವರನ್ನೆಲ್ಲಾ ‘ಒಂದು’ ಎಂದು ಹೇಳಲಾಗುವುದಿಲ್ಲ.

ಬಾರತದ ಸಂವಿದಾನ ಎಲ್ಲಾ ಬಾರತೀಯರನ್ನು ‘ಒಂದಾಗಿ’ ಕಾಣುತ್ತದೆ. ಹಲವರು ಬಾರತದಲ್ಲಿರುವವರೆಲ್ಲಾ ‘ಒಂದೇ’ ಆಗಿದ್ದರೆ ಚೆನ್ನ ಎಂದು ಕನಸು ಕಾಣುತ್ತಾರೆ. ಕಲಿಕೆ­ಯೇ­ರ‍್ಪಾಡು ಅತವಾ ಪಟ್ಯಕ್ರಮಗಳಲ್ಲಿ ಈ ಬಗೆಯ ಅನಿಸಿಕೆ­ಗಳನ್ನು ಮಕ್ಕಳ ಮನಸ್ಸಿನಲ್ಲಿ ಹರಿಯಬಿಡುತ್ತಾರೆ. ಇದ್ಯಾವುದ­ರಿಂದಲೂ ನಿಜಾಂಶ ಬದಲಾಗುವುದಿಲ್ಲ. ಬಾರತವನ್ನು ಹಲವು ಪ್ರಜಾಪ್ರಬುತ್ವಗಳ ಒಕ್ಕೂಟವೆಂದು ಕರೆಯಬಹುದೇ ಹೊರತು ‘ಒಂದು ಪ್ರಜಾಪ್ರಬುತ್ವ’ ಎಂದಲ್ಲ. ಹೀಗಿರುವಾಗ ಒಂದು ವಿಬಾ­ಗದ ತೀರ‍್ಮಾನವನ್ನು ಇತರರೆಲ್ಲರೂ ‘ಸುಪ್ರೀಂ ಕೋರ‍್ಟ್’, ‘ಕೇಂದ್ರ ಸರ‍್ಕಾರ’ ಎಂಬ ದೊಡ್ಡ ದೊಡ್ಡ ಪದ­ಗಳನ್ನು ಬಳಸಿ ತಳ್ಳಿ ಹಾಕುವುದು ಸರಿಯಲ್ಲ.

ಬಾರತೀಯರೆಲ್ಲಾ ‘ಒಂದು’ ಮತ್ತು ಬಾರತವಿಡೀ ‘ಒಂದು’ ಪ್ರಜಾಪ್ರಬುತ್ವ ಎಂಬುದರ ಆದಾರದಲ್ಲಿ ಬಾರತದ ಸಂವಿದಾ­ನ­ವನ್ನು ಕಟ್ಟಿಕೊಂಡಿ­ದ್ದೇ­ವೆಂಬುದೇ ಸರಿಯಲ್ಲ. ಈ ಪೂರ‍್ವ­ಗ್ರಹಿಕೆ­ಯೊಂದಿಗೆ ಸಂವಿದಾನವನ್ನು ಕಾಪಾಡಲು ಹೊರಡುವ ಸುಪ್ರೀಂ ಕೋರ‍್ಟ್ ನ ತೀರ್‍ಪು ಹೇಗಿರುತ್ತದೆ ಎಂಬುದಕ್ಕೆ ಈಗಾ­ಗಲೇ ನಮಗೆ ಉದಾಹರಣೆಗಳು ದೊರೆತಿವೆ. ಪರಿಣಾಮವಾಗಿ ಕರ‍್ನಾಟಕದಲ್ಲಿ ಕನ್ನಡ ಮತ್ತು ಕನ್ನಡಿಗರೇ ಆರಿಸಿರುವ ಸರ‍್ಕಾರ ಮಾಡಿದ ಕಾನೂನೊಂದನ್ನು ಕನ್ನಡೇತರರಿಂದ ಕಿಕ್ಕಿ­ರಿದು ತುಂಬಿರುವ ‘ಬಾರತ’ ತಳ್ಳಿ ಹಾಕಿದೆ. ನಾವು ಮಾಡಿ­ದ್ದನ್ನು ಸರಿಯೋ ತಪ್ಪೋ ಎಂಬುದನ್ನು ತೀರ‍್ಮಾನಿಸಲು ಈ ‘ಬಾರತ’ದವರೆಲ್ಲಾ ಯಾರು? ಅವರಿಗೆ ಇಶ್ಟೆಲ್ಲಾ ಅದಿಕಾರ ಎಲ್ಲಿಂದ ಬಂತು?

ಈ ಪ್ರಕರಣದಲ್ಲಿ ಆದ ಹಿನ್ನಡೆಯನ್ನು ಗಮನದಲ್ಲಿಟ್ಟು­ಕೊಂಡು ಸಂವಿದಾನಕ್ಕೆ ತಿದ್ದುಪಡಿ ತರಬೇಕು ಎಂದು ಕೇಂದ್ರದ ಮೇಲೆ ಒತ್ತಡ ತರುವುದಕ್ಕೆ ಕರ‍್ನಾಟಕ ಸರ‍್ಕಾರ ಮುಂದಾಗಿ­ರು­ವುದು ಸರಿಯಾದ ದಿಕ್ಕಿನಲ್ಲಿಯೇ ಇದೆ. ಆದರೆ ಈಗ ಉದ್ದೇಶಿ­ಸ­ಲಾಗಿರುವ ಸಂವಿದಾನ ತಿದ್ದುಪಡಿಗಳಿಂದಶ್ಟೇ ಇದು ಸರಿಯಾಗುವುದಿಲ್ಲ. ತಿದ್ದುಪಡಿ ಎಂಬುದು ಮೇಲು­ಮೇಲಿನ ಮಾರ‍್ಪಾಡಶ್ಟೆ. ಆಗಬೇಕಾಗಿ­ರುವುದು ಅದಲ್ಲ. ಒಕ್ಕೂಟ ವ್ಯವಸ್ತೆ­ಯನ್ನು ಗಮನದಲ್ಲಿಟ್ಟುಕೊಂಡು ಸಂಪೂರ‍್ಣವಾಗಿ ಹೊಸ­ತೊಂದು ಸಂವಿದಾನವನ್ನು ರಚಿಸಬೇಕಾ­ಗಿದೆ. ಅದರಲ್ಲಿ ಹೊರ­ದೇಶಗಳಿಂದ ರಕ್ಶಣೆ­ಯನ್ನು ಬಿಟ್ಟರೆ ಬೇರಾವ ವಿಶಯ­ದಲ್ಲೂ ರಾಜ್ಯಗಳ ವ್ಯವಹಾರದಲ್ಲಿ ಕೇಂದ್ರ ಕಯ್ ಹಾಕ­ಬಾರದು. ಪ್ರಪಂಚದಲ್ಲಿರುವ ಬಹುತೇಕ ಪ್ರಜಾ­ಪ್ರಬುತ್ವ­ಗಳಲ್ಲಿ ಈ ವ್ಯವಸ್ತೆ ಇದೆ. ಇಂತದ್ದೊಂದು ಸಾಂವಿದಾನಿಕ ವ್ಯವಸ್ತೆ ಬೇಕೆಂದು ಕರ‍್ನಾಟಕ ಒತ್ತಡ ಹೇರಬೇಕು.

ಒಂದು ವೇಳೆ ಸಂವಿದಾನದ ಮರು ಬರವಣಿಗೆಯಾಗಿ ಎಲ್ಲವೂ ಬದಲಾದ ನಂತರ ಒಂದರಿಂದ ನಾಲ್ಕನೆಯ ತರಗತಿ­ಯ­ವರೆಗಿನ ಕಲಿಕೆ ತಾಯ್ನುಡಿಯಲ್ಲೇ ನಡೆಯಬೇಕೆಂಬ ಕಟ್ಟಳೆ­ಯನ್ನು ಕರ‍್ನಾಟಕ ಸರ‍್ಕಾರ ಹೇರಬಹುದೇ ಎಂಬ ಪ್ರಶ್ನೆ ಉಳಿಯು­ತ್ತದೆ. ಕನ್ನಡನಾಡು ಒಂದು ಸ್ವತಂತ್ರ ಪ್ರಜಾ­ಪ್ರಬುತ್ವವಾದ ಮಾತ್ರಕ್ಕೆ ಇಂಗ್ಲಿಶ್ ಮಾದ್ಯಮವನ್ನು ಆಯ್ದು­ಕೊಳ್ಳದಂತೆ ಜನರನ್ನು ತಡೆದುಬಿಡಬಹುದೇ? ಈ ಬಗ್ಗೆ ಹೆಚ್ಚು ಚರ‍್ಚಿಸುವ ಅಗತ್ಯವಿಲ್ಲ. ಏಕೆಂದರೆ ಪ್ರಜಾಪ್ರಬುತ್ವದ ನಿಯಮ­ದಂತೆ ಆಯ್ಕೆಯಾಗಿ ಬಂದಿರುವ ಕರ‍್ನಾಟಕ ಸರ‍್ಕಾರ ಈ ರೀತಿಯ ಕಾನೂನುಗಳನ್ನು ಮಾಡುವುದರಲ್ಲಿ ತಪ್ಪಿಲ್ಲ. ಪ್ರಜಾ­ಪ್ರಬುತ್ವ­ವೆಂದರೆ ಯಾರು ಏನನ್ನು ಬೇಕಾದರೂ ಮಾಡಿ­ಕೊಳ್ಳ­ಬಹುದು. ಸರ‍್ಕಾರ ಯಾರ ಮೇಲೂ ಯಾವ ಒತ್ತಡವನ್ನೂ ಹೇರುವಂತಿಲ್ಲ ಎಂದಲ್ಲ. ಹಾಗೆನ್ನುವುದಾದರೆ ಎಲ್ಲರೂ ರಸ್ತೆಯ ಎಡಗಡೆಯೇ ವಾಹನ ಚಲಾಯಿಸಬೇಕೆಂಬ ಕಾನೂನು ಕೂಡ ತಪ್ಪಾಗುತ್ತದೆ. ಕಳ್ಳರನ್ನು ಸೆರೆಹಿಡಿಯು­ವುದು, ಕೊಲೆಗಡುಕರಿಗೆ ಶಿಕ್ಶೆ ಕೊಡುವುದು ತಪ್ಪಾಗುತ್ತದೆ. ಪ್ರಜಾಪ್ರಬುತ್ವದ ನಿಯಮಗಳಿಗೆ ಅನುಸಾರವಾಗಿ ಯಾವು­ದನ್ನು ಹೇರಬೇಕು ಮತ್ತು ಯಾವುದನ್ನು ಹೇರಬಾರದು ಎಂಬುದನ್ನು ನಿರ‍್ದರಿಸುವ ಕುರಿತ ಚರ‍್ಚೆ ಸರಿಯಾದುದು.

ಇನ್ನು ಪ್ರಜಾಪ್ರಬುತ್ವ ಯಾವ ತೀರ‍್ಮಾನಗಳನ್ನು ಜನರ ಮೇಲೆ ಹೇರಬಹುದು ಎಂಬ ನಿರ‍್ದಾರ ಆಯಾ ಸರ‍್ಕಾರ­ಗಳನ್ನು ಆರಿಸಿದ ಪ್ರಜೆಗಳ ಕಯ್ಯಲ್ಲಿರಬೇಕೇ ಹೊರತು ಬೇರೆ­ಯ­ವರ ಕಯ್ಯಲ್ಲಿ ಅಲ್ಲ. ತಾಯ್ನುಡಿಗೆ ಬದಲಾಗಿ ತಮಗೆ ಇಂಗ್ಲಿಶ್ ಮಾದ್ಯಮ ಆಯ್ದುಕೊಳ್ಳುವ ಹಕ್ಕಿದೆ ಎಂದು ವಾದಿಸುವವರು ಇದನ್ನು ಕರ‍್ನಾಟಕ ಸರ‍್ಕಾರದ ಮುಂದಿರಿಸ­ಬೇಕೇ ಹೊರತು ನೂರಕ್ಕೆ ತೊಂಬತ್ತರಶ್ಟು ಇತರೇ ಮಂದಿ­ಗಳಿಂದ ತುಂಬಿರುವ ‘ಬಾರತ’ದ ಮುಂದಲ್ಲ. ಈ ಮೇಲ್ಮನ­ವಿಯ ಅವಕಾಶವನ್ನು ಒದಗಿಸಿರುವುದೇ ಪ್ರಜಾಪ್ರಬುತ್ವದ ಕಡೆಗಣನೆ. ಆ ಮೇಲು–ಕೀಳೆಂಬ ಬುದ್ದಿಯನ್ನು ಎತ್ತಿ ಹಿಡಿ­ಯುವ ಪದವೇ ಸರಿಯಿಲ್ಲ. ಕಲಿಕಾ ಮಾದ್ಯಮದ ವಿಶಯ­ದಲ್ಲಿ ಕರ‍್ನಾಟಕ ಸರ‍್ಕಾರವನ್ನು ಒಲಿಸಿಕೊಳ್ಳಲಾಗದೆ ಅದು ಮಾಡಿದ ಕಾನೂನು ಅವರಿಗೆ ಹಿಡಿಸದೇ ಹೋದರೆ ಇಂಗ್ಲಿ­ಶರು ಕಟ್ಟಿದ ‘ಬಾರತ’ದಲ್ಲಿ ತಮ್ಮ ಇಂಗ್ಲಿಶ್ ಶಾಲೆ­ಗಳನ್ನು ಮುಂದುವರೆಸುವ ಆಯ್ಕೆಯಂತೂ ಅವರಿಗೆ ಇದ್ದೇ ಇದೆ.

(ಮಾಹಿತಿ ಸೆಲೆ: prajavani.net)

(ಚಿತ್ರ ಸೆಲೆ: lawdawgs)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks