ಓ ಶಿವನೇ….

– ನಾಗರಾಜ್ ಬದ್ರಾ.

man and drammatic clouds, religion concept, selective focus

ನೀನು ಸ್ರುಶ್ಟಿಸಿದ ಮಾನವನು ಹೇಗಾಗಿದ್ದಾನೆ ನೋಡು ಓ ಶಿವನೇ?

ಇವನ ಬಾಳಿನಲ್ಲಿ ಚೈತನ್ಯವನ್ನು ತುಂಬಲು ಆಸೆಯನ್ನು ನೀ ನೀಡಿದೆ,
ಆದರೆ ಅದನ್ನು ದುರಾಸೆಯನ್ನಾಗಿ ಪರಿವರ‍್ತಸಿ,
ತನ್ನ ನೆಮ್ಮದಿಯನ್ನು ಹೇಗೆ ಹಾಳು ಮಾಡಿಕೊಂಡಿದ್ದಾನೆ ನೋಡು ಓ ಶಿವನೇ.

ಇವನಿಗೆ ಬದುಕಲು ಸುಂದರವಾದ ಪರಿಸರವನ್ನು ನೀ ನೀಡಿದೆ,
ಆದರೆ ಆ ಪರಿಸರವನ್ನೇ ನಾಶಮಾಡಿ,
ಸುಂದರವಾದ ಬದುಕು ಕಟ್ಟಲು ಹೊರಟಿದ್ದಾನೆ, ಅದು ಸಾದ್ಯವೇ ಓ ಶಿವನೇ.

ಜೀವನದಲ್ಲಿ ಏನಾದರೂ ಸಾದಿಸಲು ‘ನಾನು’ ಅನ್ನೋದನು ನೀ ನೀಡಿದೆ,
ಇಂದು ಇವನು ಇಡೀ ವಿಶ್ವಕ್ಕೆ ನಾನೇ ಅದಿಪತಿ ಎಂದು,
ಹೇಗೆ ಹೊಡೆದಾಡಿಕೊಂಡು ಸಾಯುತ್ತಿದ್ದಾನೆ ನೋಡು ಓ ಶಿವನೇ.

ಬಾಳಿನಲ್ಲಿ ಪ್ರೀತಿಯನ್ನು ತುಂಬಲು ಸಂಬಂದಗಳ ಆಸರೆಯನ್ನು ನೀ ನೀಡಿದೆ
ಆದರೆ ಇವನು ಅವುಗಳನ್ನು ತನ್ನ ಸ್ವಾರ‍್ತಕ್ಕೆ ಬಳಿಸಿ,
ಅವುಗಳಿಗೆ ಬೆಲೆಯೇ ಇಲ್ಲದಾಗೆ ಮಾಡಿದ್ದಾನೆ ಓ ಶಿವನೇ.

ಈ ಬೂಮಿ ಮೇಲೆ ಬದುಕಲು ಪುಟ್ಟ ಜಾಗವನ್ನು ನೀ ನೀಡಿದೆ,
ಆದರೆ ಇವನು ದುಡ್ಡಿನ ವ್ಯಾಮೋಹದಲ್ಲಿ
ಇಡೀ ಬೂಮಿಯನ್ನು ಕೊಂಡುಕೊಳ್ಳಲು ಹೊರಟಿದ್ದಾನೆ ಓ ಶಿವನೇ.

ಬೂಮಿಯ ಮೇಲೆ ನೀನು ಸ್ರುಶ್ಟಿಸಿದ ಬುದ್ದಿ ಜೀವಿ ಇವನೇ ಅಲ್ಲವೇ
ಆದರೆ ಇಂದು ಇವನು ಬುದ್ದಿಯಿಲ್ಲದ ಜೀವಿಯಾಗಿ ಉಳಿದಿದ್ದಾನೆ ಓ ಶಿವನೇ.

ನೀನು ಮುಂದೆ ಸ್ರುಶ್ಟಿಸಲು ಹೊರಟಿರುವ
ಮಾನವನನ್ನು ಸರಿಪಡಿಸಲಿಲ್ಲ ಎಂದರೆ
ನೀನು ಸ್ರುಶ್ಟಿಸಿದ ಈ ಸುಂದರ ಜಗತ್ತಿಗೆ ಉಳಿಗಾಲಿಲ್ಲ ಓ ಶಿವನೇ.

(ಚಿತ್ರ ಸೆಲೆ: writingsoflife.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: