ಕವಿತೆ: ಅಂತರಾತ್ಮದೊಡನೆ
ಯಾರಿದ್ದಾರೆ ನನಗೆ
ನಿನ್ನ ಹೊರತು
ಮಾತನಾಡಲೆ ನಿನ್ನ ಬಳಿ
ಸ್ವಲ್ಪ ಹೊತ್ತು
ಸಹನೆಯಿಂದಾಲಿಸುವೆಯಾ
ನನ್ನ ಮಾತು
ಹೇಳುವೆನು ನಿನಗೆ
ಎಲ್ಲದರ ಕುರಿತು
ತಪ್ಪಿದೆ ಒಪ್ಪಿದೆ
ನನ್ನಲ್ಲಿ ಒಂದಿನಿತು
ಬಿಚ್ಚಿಡುವೆ ನಿನ್ನೆದುರಿಗೆಲ್ಲವನು
ಈ ಹೊತ್ತು
ಎಲ್ಲವೂ ನನ್ನಿಂದ
ದಾರಿ ತಪ್ಪಿತ್ತು
ರಕ್ಶಿಸಿದೆ ನೀನೆನ್ನ
ಹೊಣೆಯನ್ನು ಹೊತ್ತು
ಬೇಡುವೆನು ನಿನ್ನ ಬಳಿ
ಮಗುವಂತೆ ಅತ್ತು
ಕಡೆವರೆಗೂ ನನ್ನಲ್ಲಿ
ಸಂಸ್ಕಾರವ ಬಿತ್ತು
( ಚಿತ್ರ ಸೆಲೆ: pixabay.com )
ಸೊಗಸಾದ ಕವನ ಸಾಲುಗಳು
ಉತ್ತಮ
nice ?
ತುಂಬಾ ಅರ್ಥಪೂರ್ಣವಾದ ಸಾಲುಗಳು..