ಕವಿತೆ : ಎಲ್ಲವೂ, ಎಲ್ಲರೂ, ಉರಿದ ಮೇಲೆ ಬೂದಿ ತಾನೇ

– ಶಂಕರ್ ಲಿಂಗೇಶ್ ತೊಗಲೇರ್.

life, ಬದುಕು, ಸುಡುವುದು, burning

ಒಡಲ ಕಿಚ್ಚಿಗೆ ಕಡಲೆಲ್ಲಿಯ ಈಡು
ಸುರಿ ಸುರಿದು ಸುರುಟಾಗುವೆ ನೀನು
ಸಂತೆಯೊಂದಕೆ ಬಂದು ನಿಂದಿರುವೆ
ಆದಶ್ಟು ತುಂಬಿಕೊ ಕೈಚೀಲವನು
ತುಂಬಿಕೊಳ್ಳುವ ಕೈಚೀಲವೆ ಹರಿದರೆ
ಹಣವಿದ್ದು ಪ್ರಯೋಜನವೇನು

ಬಂದು ಬಾಂದವರೆಂಬವರು
ಕಣ್ಣೊಳಗೆ ಬಿದ್ದ ಕಸದಂತೆ ಅಳುಕುವರು
ನಿನ್ನ ಕಣ್ಣ ನೀರನೊರೆಸುವ
ಕುಶಲ ನಾಟಕ ತಂಡದಂತಿಪ್ಪರು
ನೆನಪಿನೊಳಿಡು ಅವು ಪಾತ್ರಗಳು
ಕೊನೆಗೆ ಕಳಚಲೇಬೇಕು ಮುಕವಾಡಗಳು

ಆಡಿದ ಮಾತಾವುದೂ ಉಳಿಯದು ಲೋಕದೊಳು
ಬರವಣಿಗೆಯೊಂದೇ ಬದುಕುವುದು ಕಾಲ ಕಾಲದೊಳು
ಬರೆಯಬೇಕು ಬರೆದು ತೀಡಬೇಕು ತೀಡಿ ನೋಡಬೇಕು
ಆ ಬ್ರಹ್ಮನ ಬರಹವೇ ಬದಲಾಗುವವರೆಗೂ
ಬರೆಯಲೇಬೇಕು, ಬರೆದು ತೀಡಲೇಬೇಕು
ತೀಡಿ ತೀಡಿ ನೋಡಲೇಬೇಕು

ನೀನೇ ಬರಿಸಬೇಕು ನಿನ್ನ ಅಂಚೆ ವೆಚ್ಚ
ತಲುಪುವವರೆಗೂ ಇರು ಸಾವದಾನದಿ ಕೊಂಚ
ಆದಿಯಾದಮೇಲೆ ಬೂದಿಯಾಗದಿರುವೆಯೇನು
ಬೂದಿಯಲ್ಲೇ ಇಹನು ನಮ್ಮ ನಿಮ್ಮ ಅಂತ್ಯಗೈಯ್ಯುವವನು
ಶಿವನೋ, ಅಲ್ಲಾಹುನೋ, ಏಸುವೋ
ಎಲ್ಲವೂ, ಎಲ್ಲರೂ, ಉರಿದ ಮೇಲೆ ಬೂದಿ ತಾನೇ

(ಚಿತ್ರ ಸೆಲೆ: timeanddate.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: