ಕವಿತೆ: ಹೊಸ ಚಿಗುರು

– ಶ್ಯಾಮಲಶ್ರೀ.ಕೆ.ಎಸ್.

ವಸಂತ ಕಾಲ, Spring

ಶಿಶಿರನು ಅಡಿಯಿಟ್ಟ ಮೇಲೆ
ಬುವಿಯೇಕೋ ಮಂಕಾಗಿದೆ

ಎಲೆಯೆಲ್ಲಾ ಉದುರಿ
ಮರವೆಲ್ಲ ಬರಿದಾಗಿದೆ

ಗಾಳಿಯೇಕೋ ಸುಮ್ಮನೆ
ಅತ್ತಿತ್ತ ತೀಡುತಲಿದೆ

ರಾಶಿ ರಾಶಿ ತರಗೆಲೆಗಳು
ಮಣ್ಣ ಮೇಲೆ ಚೆಲ್ಲಾಪಿಲ್ಲಿಯಾಗಿವೆ

ಬೋಳು ಮರದಲಿ ಕುಳಿತ
ಹಕ್ಕಿಯ ದನಿಯು ಮೂಕಾಗಿದೆ

ಮದುವ ಹೀರಲು ಬಂದ
ದುಂಬಿಗೂ ನಿರಾಶೆ ಮೂಡಿದೆ

ಆಗಸದಿಂದ ಹೊರಬಿದ್ದ
ಕಿರಣಗಳ ತಾಪ ತುಸು ಏರಿದೆ

ಕಾಲಿಯಾದ ಹಸಿರ ಮಡಿಲು
ಹೊಸ ಚಿಗುರಿನ ಬರುವಿಕೆಗೆ ಕಾತರಿಸಿದೆ.

( ಚಿತ್ರ ಸೆಲೆ: kannada.oneindia.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *