ಸಣ್ಣ ಕತೆ: ಹಸಿವು
ತೀವ್ರ ಹಸಿವು, ಕಿತ್ತು ತಿನ್ನುವ ಬಡತನ, ತಾಯಿಯ ಅನಾರೋಗ್ಯ, ತಂದೆ ಇಲ್ಲದ ಪರದೇಶಿ ಯುವಕ ರತನ್ ಸಿಂಗ್ ಬದುಕಿನ ಸಂಗರ್ಶದಲ್ಲಿ ನಲುಗಿ ಹೋಗಿದ್ದ. ಕೆಲಸಕ್ಕೆ ಹೋದರೆ ತಳ ಜಾತಿಯ ಪಟ್ಟಕಟ್ಟಿ ಕೆಲಸ ಕೊಡುತ್ತಿರಲಿಲ್ಲ. ರಾತ್ರಿ ಮನೆಗೆ ಬಂದು ಪಾತ್ರೆ ತೆಗೆದ, ಪಾತ್ರೆ ಕಾಲಿಯಾಗಿತ್ತು. ಅಮ್ಮ ಊಟಾ ಅಂದಾ. ದುಡಿದು ತಂದರೆ ಇಬ್ಬರಿಗೂ ಮದ್ಯಾಹ್ನ ಊಟ. ಅಕ್ಕಪಕ್ಕದವರು ನಮಗೆ ಸಹಾಯ ಮಾಡುತ್ತಿಲ್ಲಾ. ಏಕೆಂದರೆ ನಾವು ಕಡ ತೀರಿಸುವುದಿಲ್ಲ ಅಂತಾ ಅಮ್ಮಾ ಹೇಳಿದಳು. ಮುಂದಿನ ದಿನ ಬೆಳಿಗ್ಗೆ ಎದ್ದು ಕೆಲಸ ಹುಡುಕಲು ಹೊರಟ.
ಬಸ್ ಟಿಕೆಟ್ ಗೆ ಹಣ ಇಲ್ಲದ ಕಾರಣ ನಗರ ಬಸ್ ನಿಲ್ದಾಣದ ವರೆಗೆ ನಡೆದು ಬಂದು ಪುಟ್ ಪಾತ್ ಮೇಲೆ ನಿಂತು ಕೂಲಿ, ಕೂಲಿ ಅಂತಾ ಕೂಗುತ್ತಿದ್ದ. ಬಂದ ಮಾಲೀಕರು, ಗುತ್ತಿಗೆದಾರರು ಇವನ ಹರಿದ ಮತ್ತು ಕೊಳಕ ಬಟ್ಟೆ ನೋಡಿ ಕೂಲಿ ತಿರಸ್ಕರಿಸಿದರು. ಕೂಲಿಕಾರರನ್ನು ಕರೆದುಕೊಂಡು ಹೋಗುವ ಸಮಯ ಮುಗಿದರೆ ಕೂಲಿಯಿಲ್ಲಾ, ಮನೆಯಲ್ಲಿ ಅಮ್ಮನಿಗೆ ನನಗೆ ಅನ್ನವಿಲ್ಲಾ ಅಂತಾ ಕಂಡ ಕಂಡವರ ಕಾಲು ಹಿಡಿಯುತ್ತಿದ್ದ. ಯಾರೂ ಕೂಲಿ ಕೆಲಸಕ್ಕೆ ಕರೆಯಲೇ ಇಲ್ಲಾ. ಸಮಯ ಮೀರಿ ಹೋಗಿತ್ತು. ಕೂಲಿ ಸಿಗುತ್ತದೆ ಅಂತಾ ಬರವಸೆಯಲ್ಲಿ ಅಲ್ಲಿಯೇ ಬರುತ್ತಿದ್ದ ಮಾಲೀಕರ ಕಾರು ಹತ್ತಿರ ಹೋಗಿ ಹೋಗಿ ಕೆಲಸ ಕೇಳುತ್ತಿದ್ದ. ಒಬ್ಬ ಒರಟು ದಾಂಡಿಗ ಮಾಲೀಕ ಬಂದು ತೋಟದಲ್ಲಿ ಕೆಲಸ ಮಾಡಲು ಬರುವ ಹಾಗಿದ್ದರೆ ಬಾ ಅಂದ. ರತನ್ ಸಿಂಗ್ ನಾನು ಬರುವೆ ಅಂತಾ ಕೈ ಮುಗಿದು ನಿಂತ. ಕೂಲಿ ಎಶ್ಟು ಅಂತಾ ಮಾಲೀಕ ಕೇಳಿದ. ರತನ್ ಸಿಂಗ್ 500 ರೂ ಅಂತಾ ಹೇಳಿದ. ಸಮಯ ಮೀರಿದೆ 200 ರೂ ಹಣ ನೀಡುವೆ ಬೇಕಾರದೆ ಬಾ ಇಲ್ಲಾ ಅಂದ್ರೆ ಬಿಡು ಅಂತಾ ಹೊರಟು ನಿಂತ ಮಾಲೀಕ. ಅನಿವಾರ್ಯವಾಗಿ ರತನ್ ಸಿಂಗ್ ಬರಲು ಒಪ್ಪಿದ.
ಸಂಜೆಯವರೆಗೆ ತೋಟದಲ್ಲಿ ಹಣ್ಣು ಹರಿಯಬೇಕು. ಸಂಜೆ ಕೂಲಿ ನೀಡುತ್ತೇವೆ. ಒಂದು ಹಣ್ಣು ಕದ್ದು ತಿಂದರೆ 5 ಬೆತ್ತದ ಏಟು ಎಂದು ಶರತ್ತು ವಿದಿಸಿದ. ಒಪ್ಪಿ ಕೆಲಸಕ್ಕೆ ನಿಂತ. ಮದ್ಯಾಹ್ನದ ಹೊತ್ತಿಗೆ ಬಹಳಶ್ಟು ಹಸಿವಾಗಿ ಜೀವ ಹೋಗುವ ಸಂಕಟವಾಗಿ ಎರಡು ಸೇಬು ತಿಂದು ಬಿಟ್ಟ. ಸಹ ಕೂಲಿಕಾರರು ರತನ್ ಸಿಂಗ್ ಎರಡು ಹಣ್ಣು ತಿಂದಿದ್ದಾನೆ ಎಂದು ಮಾಲೀಕನಿಗೆ ಹೇಳಿದರು. ಮಾಲೀಕ ಕೋಪಗೊಂಡು, ರತನ್ ಸಿಂಗ್ ನನ್ನು ಕೇಳಿದ. ರತನ್ ಸಿಂಗ್ ಹೌದು ಹಣ್ಣು ತಿಂದಿರುವೆ ಎಂದು ಒಪ್ಪಿಕೊಂಡ. ಮಾಲೀಕ ಬಲವಾಗಿ ಹೊಡಿಯಲು ಪ್ರಾರಂಬಿಸಿದ. ಕೈ, ಕಾಲು, ಮುಕಕ್ಕೆ ಬಾರಿಸಿದ ಏಟು ತೀವ್ರವಾಗಿದ್ದರಿಂದ ಬಾಸುಂಡೆ ಬಂದವು. 8 ಏಟು ಬಿದ್ದವು. ರತನ್ ಸಿಂಗ್ ನೆಲಕ್ಕೆ ಕುಳಿತ, ಎದೆಗೆ ಮತ್ತು ದುಬ್ಬಕ್ಕೆ ಬಲವಾಗಿ ಎರಡು ಒದ್ದ. ಆದರೆ ರತನ್ ಸಿಂಗ್ ಅಳಲೆ ಇಲ್ಲಾ. ಕೂಲಿಕಾರರು ಹಣ್ಣು ತಿಂದು ಸಿಕ್ಕು ಬಿದ್ದಾಗ ನನ್ನ ಏಟಿಗೆ ತತ್ತರಿಸಿ ಹೋಗುತ್ತಾರೆ ಆದರೆ ಇವನು ಅಳದೆ ಸಮಾದಾನದಿಂದ ಇದ್ದಾನಲ್ಲ ಎಂದು ಮಾಲೀಕನಿಗೆ ಆಶ್ಚರ್ಯವಾಯಿತು. ನಿನಗೆ ನೋವಾಗಲಿಲ್ಲವೆ ಎಂದ, ಮಾಲೀಕರೆ “ಹಸಿವಿಗಿಂತ ದೊಡ್ಡ ನೋವು, ಸಂಕಟ, ಅವಮಾನ ಯಾವುದು ಇಲ್ಲಾ” ಅದನ್ನೇ ನಾವು ಪ್ರತಿ ದಿನ ಸಹಿಸುತ್ತಿರುವಾಗ ನಿಮ್ಮ ಏಟು ಯಾವ ಲೆಕ್ಕ ನಮಗೆ? ಏಟು ತಿಂದು ಸಹಿಸುತ್ತೇವೆ ಆದರೆ ಹಸಿವು ಸಹಿಸಲು ಸಾದ್ಯವಿಲ್ಲ ಅಂತಾ ತಿಂದೆ ಕ್ಶಮಿಸಿ ಬಿಡಿ ಎಂದ.
ಈ ಮಾತು ಕೇಳಿ ಮಾಲೀಕನಿಗೆ ತನ್ನ ವಿಕ್ರುತಿ ಬಗ್ಗೆ ಪಶ್ಚಾತ್ತಾಪವಾಯಿತು. ಸಂಜೆ ಮಾಲೀಕ 200 ರೂ ಕೂಲಿ ನೀಡಿದ. ರತನ್ ಸಿಂಗ್ ಚಿಲ್ಲರೆ ಮಾಡಿಸಿ ಮಾಲೀಕನ ಬಳಿ ಬಂದು ಒಂದು ಹೆಣ್ಣಿಗೆ 10 ರೂಪಾಯಿಯಂತೆ 20 ರೂ ನೀಡಿದ. ಈತನ ದರ್ಮ ನಿಶ್ಟೆ, ಪ್ರಾಮಾಣಿಕತೆ ನೋಡಿ ಮಾಲೇಕ ತನ್ನ ವಿಕ್ರುತಿಯನ್ನೆ ಬದಲಿಸಿ ಬಿಟ್ಟ. ರತನ್ ಸಿಂಗ್ ನ ಮನೆ ಕತೆ, ಕಶ್ಟದ ಬದುಕು ಕೇಳಿ ಕಾಯಂ ಕೂಲಿಯಾಗಿ ಮಾಡಿಕೊಂಡ. ಪ್ರತಿ ದಿನ ದುಡಿಯುವ ಎಲ್ಲಾ ಕೂಲಿಕಾರರಿಗೆ ಮದ್ಯಾಹ್ನ ಎರಡು ಹಣ್ಣು ನೀಡುವ ಪದ್ದತಿ ತಂದ. ರತನ್ ಸಿಂಗ್ ನ ಹಸಿವಿನ ನೋವು ಎಲ್ಲರ ಬದುಕಿನ ದಿಕ್ಕನ್ನೇ ಬದಲಿಸಿತು.
(ಚಿತ್ರಸೆಲೆ: pixabay.com )
ಇತ್ತೀಚಿನ ಅನಿಸಿಕೆಗಳು