ಕವಿತೆ: ಅವರಿಗೇನು ಗೊತ್ತು

– ಶಿವಮೂರ‍್ತಿ. ಹೆಚ್. ದಾವಣಗೆರೆ.

ಐನೂರು ಸಾವಿರ ರೂಪಾಯಿಯ
ರಾತ್ರೋರಾತ್ರಿ ಜನರ ಕೈಗೆ ಕೊಟ್ಟು
ಚುನಾವಣೆಯ ಗೆದ್ದವರಿಗೇನು ಗೊತ್ತು
ಜನಸಾಮಾನ್ಯರ ದಿನನಿತ್ಯದ ಸಂಕಟವು

ಗಾಂದಿ ಟೋಪಿಯ ತೊಟ್ಟು
ಕಾದಿ ಬಟ್ಟೆಯನು ಉಟ್ಟು
ಗಾದಿಯೇರಿದವರಿಗೇನು ಗೊತ್ತು
ಬೀದಿಯಲಿ ನರಳುವವರ ನೋವು?

ಉಪ್ಪರಿಗೆಯಲ್ಲಿ ಕುಳಿತುಕೊಂಡು
ಕೊಪ್ಪರಿಗೆಯಶ್ಟು ದುಡ್ಡು ಕೂಡಿಟ್ಟು
ತುಪ್ಪದನ್ನವನುಣ್ಣುವರಿಗೇನು ಗೊತ್ತು
ತಿಪ್ಪೆಯನ್ನಕ್ಕೆ ಕೈಹಾಕುವವರ ಹಸಿವು

ಕೋಟೆಗಟ್ಟಲೆ ಜನರ ಹಣವನು ಲೂಟಿಗೈದು
ಕೋಟೆ ಮಹಲಿನ ಅರಮನೆಯ ಕಟ್ಟಿಕೊಂಡು
ಕೋಟ್ಯಾದಿಪತಿಗಳಾಗಿರುವರಿಗೇನು ಗೊತ್ತು
ರಟ್ಟೆ ಮುರಿದು ದುಡಿಯೋ ಬಡವರ ಜೀವನವು

(ಚಿತ್ರ ಸೆಲೆ: news18.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: