ರಾಗವಾಂಕ ಕವಿಯ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದು – 24ನೆಯ ಕಂತು: ಚಂದ್ರಮತಿಯ ಮೇಲೆ ಕೊಲೆಯ ಆರೋಪ
– ಸಿ.ಪಿ.ನಾಗರಾಜ.
*** ಪ್ರಸಂಗ-24: ಚಂದ್ರಮತಿಯ ಮೇಲೆ ಕೊಲೆಯ ಆರೋಪ ***
(ಟಿ.ಎಸ್.ವೆಂಕಣ್ಣಯ್ಯ ಮತ್ತು ಎ.ಆರ್.ಕೃಷ್ಣಶಾಸ್ತ್ರಿ (ಸಂಪಾದಕರು) : ಹರಿಶ್ಚಂದ್ರ ಕಾವ್ಯ ಸಂಗ್ರಹ ಈ ಹೊತ್ತಗೆಯ ‘ಲೋಹಿತಾಶ್ವನ ಮರಣ, ಚಂದ್ರಮತಿಯ ದುಃಖ ’ ಎಂಬ ಎಂಟನೆಯ ಅದ್ಯಾಯದ 45ರಿಂದ 56ನೆಯ ಪದ್ಯದ ವರೆಗಿನ ಹನ್ನೆರಡು ಪದ್ಯಗಳನ್ನು ನಾಟಕ ರೂಪಕ್ಕೆ ಅಳವಡಿಸಲಾಗಿದೆ.)
ಪಾತ್ರಗಳು:
ಚಂದ್ರಮತಿ: ಹರಿಶ್ಚಂದ್ರನ ಹೆಂಡತಿ. ಲೋಹಿತಾಶ್ವನ ತಾಯಿ.ಈಗ ಕಾಶಿ ನಗರದಲ್ಲಿರುವ ಬ್ರಾಹ್ಮಣನ ಮನೆಯೊಂದರಲ್ಲಿ ದಾಸಿಯಾಗಿದ್ದಾಳೆ.
ಹರಿಶ್ಚಂದ್ರ: ಅಯೋದ್ಯಾಪುರವನ್ನು ರಾಜದಾನಿಯನ್ನಾಗಿ ಮಾಡಿಕೊಂಡು ಲಾಳ ದೇಶದ ರಾಜನಾಗಿದ್ದವನು. ವಿಶ್ವಾಮಿತ್ರ ಮುನಿಗೆ ತನ್ನ ಸಕಲ ರಾಜಸಂಪತ್ತನ್ನು ನೀಡಿ, ಯಾವುದೇ ರಾಜ್ಯವಾಗಲಿ ಇಲ್ಲವೇ ಸಂಪತ್ತಾಗಲಿ ಇಲ್ಲದ ವ್ಯಕ್ತಿ. ಈಗ ವೀರಬಾಹುಕನ ದಾಸನಾಗಿ ಕಾಶಿ ನಗರದ ಸುಡುಗಾಡಿನ ಕಾವಲುಗಾರನಾಗಿದ್ದಾನೆ.
*** ಚಂದ್ರಮತಿಯ ಮೇಲೆ ಕೊಲೆಯ ಆರೋಪ ***
ಇತ್ತಲ್ ಪುರಕೆ ಬರುತಿಪ್ಪ ಮಡದಿಗೆ ಎಡೆವಟ್ಟೆಯೊಳು ಬಂದ ಸಂಕಟವನ್ ಇನ್ನಾವ ಜೀವರು ಕೇಳ್ವರು. ಮುಂದೆ ಭೂಪನ ಸತಿಗೆ ಉಪದ್ರವಮ್ ಮಾಡಬೇಕೆಂದು ಕೌಶಿಕ ಮುನೀಂದ್ರನ್ ನೆನೆದು ಚಿಂತಿಸುತ್ತ, ಒಂದು ಉಪಾಯಮ್ ಕಂಡು, ಚೋರರಮ್ ಕೆಲಬರಮ್ ನಿರ್ಮಿಸುತ ಅವರ್ಗೆ ಎಂದನು.
ವಿಶ್ವಾಮಿತ್ರ: ಇಂದು ನೀವ್ ಈ ಪುರವನ್ ಆಳ್ವ ಅರಸನ ಅಣುಗನನ್ ಕೊಂದು, ಆಕೆ ಬಪ್ಪ ಬಟ್ಟೆಯೊಳಿರಿಸಿ ಬನ್ನಿ… ಹೋಗಿ.
(ಎಂದು ಬೆಸಸಲು, ಯತಿಪನ ಆಜ್ಞೆಯಿಂದ ಅವದಿರ್ ಎಯ್ತಂದು ಪೊಳಲಮ್ ಸಾರ್ದರು. ಚೋರರ್ ಒಳಪೊಕ್ಕು ಮಿಕ್ಕು ಆ ಪುರದ ಭೂಪನ ಕುಮಾರನನ್ ಕಂಡು ಓಡಿಬಂದು, ಗೊಂದಿಯೊಳ್ ಅಲಂಕಾರಮಮ್ ಕೊಂಬ ಭರದಿನ್ ಕೊರಳನ್ ಅರಿಯಲ್… ಆ ಶಿಶು ಒರಲಲ್… ಆ ದನಿಯನು ದೂರದಿಮ್ ಕೇಳ್ದು… )
ಚಂದ್ರಮತಿ: ಎನ್ನ ಮಗನಾಗದಿರನ್… ಆರೋ ನಿರೋಧಿಸುವರ್.
(ಎಂದು ಓಜೆ ಹುಟ್ಟದ ಅವಿಚಾರದಿಮ್ ಹರಿದಳ್ ಎಂಬಾಗಳ್, ಜಗವರಿಯಲು ಅತಿದುಃಖಿಗೆ ಉಂಟೇ ಬುದ್ಧಿ. ಸಾರೆ ಬರೆ, ಬಿಟ್ಟೋಡಿ ಹೋದ ಚೋರರ ಖಡ್ಗ ಧಾರೆಯಿಮ್ ಬಸವಳಿದ ಹಸುಳೆಯನ್ ತನ್ನಯ ಕುಮಾರನೆಂದೇ ಬಗೆದು, ಕರೆಕರೆದು ತಲೆದಡವಿ ತಡವರಿಸಿ ಮೆಯ್ ಕುರುಹನು ಹಾರುತಿರೆ, ಬಾರಿಸುವ ಬೊಂಬುಳಿಯ ಕೊಂಬುಗಳ ಭೇರಿಗಳ ಬೊಬ್ಬೆಗಳ ಕಳಕಳದೊಳ್ ಅರಸಿ ಬಂದು, ಆರುತ್ತ ಹರಿತಂದ ಹಿರಿಯ ಹುಯ್ಯಲ ಭಟರು ಸತಿಯನು ಕಂಡು ಪಿಡಿದರು.)
ರಾಜಭಟರು: ಎಲೆಲೆ… ಇವಳು ರಕ್ಕಸಿಯಾಗದಿರಳ್. ನಾವ್ ಇಲ್ಲಿ ಕೊಲಬೇಡವು. ಈ ಅಂಗವೆರಸಿ ಕೊಂಡೊಯ್ದು ಭೂತಲಪತಿಗೆ ಕೊಡುವೆವು.
(ಎಂದು ಅಸುವಳಿದ ಹಸುಳೆಯಮ್ ಹೊರಿಸಲಾಗ, ತಲೆಯಿಂದ ಒಸರ್ವ ರಕುತ ಸುರಿದು, ಉಟ್ಟ ಸೀರೆ ತೊಪ್ಪನೆ ತೋಯೆ, ಲಲನೆಯನ್ ಹೆಡಗೈಯ ಬಲಿದ ನೇಣಮ್ ಪಿಡಿದು, ರಾಜಬೀದಿಯೊಳಗೆ ಕಿತ್ತ ಅಲಗುಗಳ ನಡುವೆ ಜಡಿಜಡಿದು ನಡಸಿ ತಂದರು.)
ಚಂದ್ರಮತಿ: ಎನ್ನನ್ ಇವರ್ ಆಡಿಸದಡೆ ಏನನ್ ಆಡುವೆನ್.
(ಎಂದು ತನ್ನ ಮನದೊಳು ತಾನೆ ತಿಳಿದು ನಿಶ್ಚಯಿಸಿದಳು.)
ಮುನ್ನ ಏಗಳ್ ಆವಾವ ದುಃಖವುಂಟು ಅವನ್ ಎಯ್ದೆ ಕಂಡೆನ್ ಉಂಡೆನು ತಣಿದೆನು. ಇನ್ನೇನ ಕಾಣಲಿರ್ದಪೆನ್. ಅರಸ, ಕೇಳಿದಡೆ ನಿನ್ನ ಮಗನನ್ ಕೊಂದ ಪಾಪಿ ಆನ್ ಎಂದಾಡಿ ಅನ್ಯಾಯದಿಮ್ ಸಾವೆನ್.
(ಎನುತ ಬರಲ್, ಓಲಗದ ಗಜಬಜವನ್ ಏನ್ ಪೊಗಳ್ವೆನು.)
ರಾಜಭಟರು: ಅಲ್ಲಿ ನೋಡು… ಇಲ್ಲಿ ನೋಡು… ಅತ್ತ ಹರಿ… ಇತ್ತ ಹರಿ… ತುರಗಮಮ್ ಹಲ್ಲಣಿಸು… ಕೈದುಗೊಳ್ಳು… ಊರಮನೆ ಎಲ್ಲವಮ್ ಸೋದಿಸುವುದು… ಊರ ದಾರಿಗಳಲ್ಲಿ ಕಂಡಿರಾದಡೆ ಕಳ್ಳರ ಕೊಲ್ಲು… ತಿದಿಯನ್ ಉಗಿ.
(ಎಂಬ ಕಳಕಳರವದ ಘಲ್ಲಣೆಯ ಭಟರ ತಿಂತಿಣಿಯೊಳ್ ಓಲಗಮ್ ಕೊಟ್ಟು, ಉಪ್ಪರಿಗೆ ಜಡಿದು ಅಲ್ಲಾಡುವಂತೆ ಕೋಪಾಗ್ನಿ ರೂಪಾದ ಭೂಪನಿರಲು.)
ರಾಜಭಟರು: ಅವಧರಿಸು, ಹಸುಳೆಯನ್ ಕದ್ದು ಕೊಂಡೊಯ್ದು ನೋಯಿಸಿದ ರಕ್ಕಸಿಯ ಹಿಡಿತಂದೆವು.
(ಎನಲು ಕಂಡು ಶಂಕಿಸುತ )
ಕಾಶಿ ರಾಜ: ನೀನಾರ್… ಎತ್ತಣವಳ್… ಸುಕುಮಾರಕನನ್ ಏಕೆ ಕೊಂದೆ.
(ಎಂದು ಅರಸನ್ ಬೆಸಗೊಳಲು… )
ಚಂದ್ರಮತಿ: ಆನ್ ದನುಜೆಯಲ್ಲ. ಆನ್ ಮನುಜೆ. ಅರ್ಥ ವಿಷಯದ ಅಪೇಕ್ಷೆಯಿಮ್ ಈ ಸಿಸುವ ಕೊಂಡೊಯ್ದು ಕೊಂದೆನ್. ಎನ್ನನ್ ನೀನ್ ಒಲಿದಂತೆ ಮಾಡು.
(ಎಂದಳ್ ಆ ರಾಣಿ ವಸುಧಾಧಿಪತಿಗೆ… )
ಕಾಶಿ ರಾಜ : ಹೆದರದಿರು… ತೆಕ್ಕದಿರು… ಅಂಜದಿರು. ಹೇಳು, ಲೋಗರ್ ಇಟ್ಟುದೊ… ನಿನ್ನ ಕೃತಕವೋ. ಧರ್ಮಾಧಿಕರಣದವರಮ್ ಕರಸುವೆನ್… ನುಡಿಸುವೆನ್… ಕಾವೆನ್.
(ಎಂದು ಅವನಿಪನ್ ಬೆಸಗೊಂಡಡೆ… )
ಚಂದ್ರಮತಿ: ಇದಕೆ ಇನ್ನು ಧರ್ಮಾಧಿಕರಣ ಏಗುವುದು. ಕೊಂದುದು ದಿಟಮ್. ಸತ್ತ ಶಿಶು ಕೈಯಲಿದೆ. ಇದಕೆ ತಕ್ಕುದನ್ ಈಗ ಕಾಂಬುದು.
(ಎಂದು ಜೀವದಾಸೆಯನ್ ಏನುವಮ್ ಹಾರದೆ ಆಡಿದಳು.)
ಪ್ರಜೆ-1: ಕೊಂದೆ… ಕೊಂದೆನ್… ಕೊಂದೆನ್ ಎಂದು ತನ್ನಿಂದ ತಾನೆ ಎಂದಡೆ… ಇನ್ನೇಕೆ ಲೋಕದ ಮಾತು.
ಪ್ರಜೆ-2: ಕೊಂದರಮ್ ಕೊಂದು ಕಳೆವುದೆ ಧರ್ಮ.
ಪ್ರಜೆ-3: ಜಗವರ್ತಿಯಮ್ ಹೊತ್ತಿಸು.
ಪ್ರಜೆ-4: ಎಳೆಹೂಟೆಯಮ್ ಹೂಡಿಸು.
ಪ್ರಜೆ-5: ಸಂದುಸಂದಮ್ ಕಡಿಸು.
ಪ್ರಜೆ-6: ಕಿವಿಮೂಗನ್ ಅರಿ.
ಪ್ರಜೆ-7: ಬಹಳದಿಂದ ತಿವಿ.
(ಎಂದು ಒಬ್ಬರ್ ಒಂದೊಂದನ್ ಎಂದುದು ಆ ಮಂದಿ ತನತನಗೆ ನುಡಿಯುತ್ತಿರಲ್ ಅರಸನು ವೀರಬಾಹುಕನ ಕರಸಿದನ್.)
ಕಾಶಿರಾಜ: ಭೂನುತ ಕುಮಾರನನ್ ದಹಿಸಿ, ದೂವೆಯ ಕೆಲದೊಳ್ ಈ ನರಕಿ ವನಿತೆಯನ್ ಅನಾಮಿಕನ ಕಯ್ಯೊಳ್ ಅನುಮಾನವಿಲ್ಲದೆ ಕೊಲಿಸು… ಹೋಗು.
(ಎಂದು ವೀರಬಾಹುಕನ ಕೈಯಲಿ ಕಳುಹಲು, ವೀರಬಾಹುಕನು ರಾಜನ ಆಜ್ಞೆಯನ್ನು ಪಾಲಿಸಲು ಚಂದ್ರಮತಿಯನ್ನು ಕರೆದೊಯ್ಯುತ್ತಾ..)
ವೀರಬಾಹುಕ: ಏನ್ ಎಂದುದಮ್ ಮಾಳ್ಪೆನ್ ಎಂದು ಸುಡುಗಾಡನ್ ಅತ್ಯಾನಂ
ಇತ್ತೀಚಿನ ಅನಿಸಿಕೆಗಳು