ಪರಿಸರದೊಂದಿಗೆ ಸಹಬಾಳ್ವೆ

ಸುದಾ ರಮೇಶ್

ಗಾಳಿ, ಬೆಳಕು, ಕುಡಿಯುವ ನೀರು ಇವೆಲ್ಲವೂ ನಮಗೆ ಅತ್ಯಗತ್ಯ. ಆದರೆ ಇವೆಲ್ಲವೂ ಶುದ್ದವಾಗಿದ್ದರೆ ಮಾತ್ರ ಅದರಿಂದ ಉಪಯೋಗ, ಇಲ್ಲವಾದಲ್ಲಿ ತೊಂದರೆಗಳೇ ಹೆಚ್ಚು. ಹಾಗಾಗಿ ನಮ್ಮ ಪರಿಸರವನ್ನು ಶುದ್ದವಾಗಿಟ್ಟುಕೊಳ್ಳುವುದು ಅವಶ್ಯಕ. ಇದು ಹೇಗೆ ಎಂಬುದದರ ಬಗೆಗೆ ಅರಿಯುವ ಮೊಗಸು ಮಾಡೋಣ ಬನ್ನಿ.

ನಾವೆಲ್ಲರೂ ಶುದ್ದಗಾಳಿ ಸ್ವಚ್ಚ ಜಲವಿರುವ ನಿರ್‍ಮಲ ವಾತಾವರಣದಲ್ಲಿ ಇರಬೇಕು ಎಂದು ಬಯಸುತ್ತೇವೆ. ನಾವು ವಾಸಿಸುವ ಮನೆ, ನಮ್ಮ ಕೋಣೆಗಳನ್ನು ದಿನನಿತ್ಯ ಸ್ವಚ್ಚಗೊಳಿಸುತ್ತೇವೆ. ನಮ್ಮ ದೇಹಕ್ಕೆ ನಿತ್ಯವೂ ಸ್ನಾನ ಬೇಕು. ನಾವು ಉಡುವ ಉಡುಪು ಶುದ್ದವಾಗಿರಬೇಕು. ಆದರೆ ನಾವು ಬದುಕುವ ಬೂಮಿ, ನಮ್ಮ ಸುತ್ತ-ಮುತ್ತಲಿನ ಪರಿಸರ ಸಹ ಸುಂದರವೂ, ಶುಬ್ರವೂ ಆಗಿರಬೇಕೆಂದು ಎಂದಾದರೂ ಯೋಚಿಸುತ್ತೇವೆಯೇ ? ಜೂನ್ 5 ರಂದು ನಾವೆಲ್ಲರೂ “ವಿಶ್ವ ಪರಿಸರ ದಿನ” ವನ್ನು ಆಚರಿಸಿದೆವು.

ಜೂನ್ 5 ಪರಿಸರ ದಿನದ ಮುಕ್ಯ ಉದ್ದೇಶ ನಮ್ಮ ಉದ್ದೇಶ ನಮ್ಮ ಪರಿಸರದಲ್ಲಿ ಸ್ವಚ್ಚತೆಯನ್ನು ಕಾಪಾಡುವುದು. ಗಿಡ-ಮರಗಳನ್ನು ಉಳಿಸಿ ಬೆಳಸುವುದು. ಎಲ್ಲರೂ ತಮ್ಮ ವಾಸಸ್ತಳ, ಶಾಲೆ, ಕಚೇರಿಗಳ ಬಳಿ ಗಿಡಗಳನ್ನು ನೆಟ್ಟು ಅವುಗಳ ಕಾಳಜಿ ಮಾಡುವುದು, ಎಲ್ಲಿ ಹಸಿರು ಹಬ್ಬಿರುತ್ತದೆಯೋ ಅಲ್ಲಿ ಕಣ್ಮನಗಳಿಗೆ ತಂಪು ಸಿಗುತ್ತದೆ. ಶುದ್ದಗಾಳಿಯಿಂದ ಆರೋಗ್ಯ ಬಾಗ್ಯ ನಮ್ಮದಾಗುತ್ತದೆ. ಇಂದು ಕಡಿಮೆಯಾಗುತ್ತಿರುವ ಅರಣ್ಯಗಳು, ಬೆಳೆಯುತ್ತಿರುವ ಪಟ್ಟಣಗಳು, ತಲೆಯೆತ್ತುತ್ತಿರುವ ಹೊಸ ಹೊಸ ಕೈಗಾರಿಕೆಗಳು, ಹೆಚ್ಚುತ್ತಿರುವ ಜನಸಂಕ್ಯೆಯಿಂದಾಗಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಜಾಗತಿಕ ತಾಪಮಾನ ಸಮಸ್ಯೆ ಎದುರಾಗುತ್ತಿದೆ.

ಬೇಸಿಗೆ ಬಂತೆಂದರೆ ಬಿಸಿಲಿಗೆ ಮೈ ಒಡ್ಡಲಾಗದಶ್ಟು ತಾಪ. ಅನಿರ್‍ದಿಶ್ಟವಾಗಿ ಬರುವ ಮಳೆ , ಊರಿಗೆ ಊರೇ ಕೊಚ್ಚಿಕೊಂಡು ಹೋಗುವ ಪ್ರವಾಹ, ದರೆಗಳ ಕುಸಿತದಿಂದ ಉಂಟಾಗುವ ಆಸ್ತಿಹಾನಿ, ಜೀವಹಾನಿ, ರುತುಗಳಲ್ಲಿ ಅಸಮತೋಲನ ಇದರಿಂದ ಹೊಸ ಹೊಸ ಕಾಯಿಲೆಗಳು ಈ ಜಗತ್ತಿಗೆ ಕಾಲಿಡುತ್ತಿವೆ. ಇದಕ್ಕೆಲ್ಲ ಕಾರಣವೇನೆಂದು ಕೇಳಿದರೆ, ಅದಕ್ಕೆ ಉತ್ತರ ನಾವೇ!.. ಹೌದು ಇಂದು ಪರಿಸರದಲ್ಲಿ ಆಗುತ್ತಿರುವ ವ್ಯತಿರಿಕ್ತವಾದ ಬದಲಾವಣೆಗಳಿಗೆ ಕಾರಣ ಮನುಶ್ಯರಾದ ನಮ್ಮ ಚಟುವಟಿಕೆಗಳು, ನಾವು ಬಳಸುವ ರಾಸಾಯನಿಕಗಳು, ಎ.ಸಿ, ಪ್ರಿಡ್ಜ್ ಗಳಿಂದ ಹೊರಹಾಕಲ್ಪಡುವ ಕೆಲವು ಹಸಿರುಮನೆ ಅನಿಲಗಳು ವಾತಾವರಣವನ್ನು ಸೇರಿ ಜಾಗತಿಕ ತಾಪಮಾನವನ್ನು ಹೆಚ್ಚಿಸುತ್ತಿವೆ.

ನಾವು ನಮ್ಮ ವೈಯಕ್ತಿಕ ಸ್ವಚ್ಚತೆ ಮತ್ತು ರಕ್ಶಣೆಗೆ ಎಶ್ಟು ಗಮನ ಕೊಡುತ್ತೇವೋ ನಮ್ಮ ಪರಿಸರದ ಬಗೆಗೆ ಸಹಾ ಅಶ್ಟೇ ಗಮನ ಕೊಡುವುದು ಇಂದಿನ ಆದ್ಯತೆಯಾಗಬೇಕು. ಪರಿಸರದ ವಿರುದ್ದ ನಾವು ನಡೆಸುವ ಯಾವುದೇ ಚಟುವಟಿಕೆಯಿಂದ ಮೊದಲು ತೊಂದರೆ ಅನುಬವಿಸುವವರು ನಾವೇ ಎಂಬ ಪ್ರಜ್ನೆ ನಮ್ಮೊಳಗಿರಬೇಕು. ಗಾಳಿ, ಬೆಳಕು, ನೀರು ಮತ್ತು ಮಣ್ಣು ಇವೆಲ್ಲವೂ ಪ್ರಕ್ರುತಿ ನಮಗೆ ನೀಡಿರುವ ಅಮೂಲ್ಯ ಕೊಡುಗೆ. ಅದನ್ನು ಕಾಯುವುದು ನಮ್ಮೆಲ್ಲರ ಆದ್ಯ ಕರ್‍ತವ್ಯ. ಪರಿಸರದಿನವೆಂಬುದು ಬರಿ ತೋರಿಕೆಗೆ ಮಾಡುವ ಆಚರಣೆಯಾಗದೆ, ಪರಿಸರದ ಬಗೆಗೆ ಪ್ರತಿಯೊಬ್ಬರಲ್ಲಿಯೂ ಜಾಗ್ರುತೆ ಮೂಡಿಸುವ ಅಬಿಯಾನವಾಗಬೇಕು. ಇದನ್ನು ಅರ್‍ತಪೂರ್‍ಣವಾಗಿಸಬೇಕೆಂದರೆ ಪ್ರತಿದಿನ ಎಚ್ಚೆತ್ತುಕೊಂಡು, ಪರಿಸರದ ಉಳಿವಿಗಾಗಿ ಕಾರ್‍ಯಪ್ರವ್ರುತ್ತರಾಗಬೇಕು. ಇದರಿಂದ ಮನುಕುಲದ ಜೀವಿಗಳು ಉಳಿಯಬೇಕು. ಪ್ರತಿಯೊಬ್ಬರೂ ಸಹ ಇದರಲ್ಲಿ ಪಾಲ್ಗೊಂಡು ಹಸಿರನ್ನು ಉಳಿಸೋಣ.

( ಚಿತ್ರಸೆಲೆ: designer.microsoft.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *