ಕವಿತೆ : ನಮ್ಮೂರ ಜಾತ್ರೆಯಣ್ಣ
ನಮ್ಮೂರ ಜಾತ್ರೆಯಣ್ಣ ಬನ್ನಿರಿ ನೀವೆಲ್ಲರೂ
ಹರುಶದಿಂದ ಸಂಬ್ರಮಿಸೋಣ ಒಂದಾಗಿ ನಾವೆಲ್ಲರೂ
ದೇಗುಲಕೆ ಹೋಗೋಣ ಹರಕೆ ತೀರಿಸಿ ಬರೋಣ
ಹಣ್ಣುಕಾಯಿ ನೀಡಿ ದೇವರಿಗೆ ಬಕ್ತಿಯಿಂದ ಬೇಡೋಣ
ಮಕ್ಕಳಿಗೆ ದಿಟ್ಟಿ ತಾಕದಂತೆ ಕಾಣ್ಕೆ ತೆಗೆದು ಇಡೋಣ
ದೇವಾಲಯಕೆ ಸುತ್ತು ಬಂದು ಅಡ್ಡ ಬೀಳೋಣ
ಮಿಟಾಯಿ ಮಾರುವವನು ಬಲೂನು ಊದುವವನು
ಬಣ್ಣಬಣ್ಣದ ಗಾಜಿನ ಬಳೆಯ ಬಳೆಗಾರನು
ಕಾರದ ಕಡ್ಡಿ ಸಿಹಿಕಡ್ಡಿ ಹುರಿಗಡಲೆಯ ಮಾರುವವನು
ಮಂಡಕ್ಕಿ ಕಾರದ ಚುರುಮುರಿಯ ಕೊಡುವವನು
ಕಿಲಕಿಲ ನಗುವ ತರುಣಿಯರು, ಕೂಲಿಂಗ್ ಗ್ಲಾಸಿನ ಹುಡುಗರು
ಆಟಿಕೆ ಬೇಕು ಎಂದು ಹಟಮಾಡೋ ಪುಟಾಣಿಗಳು
ಚೌಕಾಶಿ ಮಾಡುತ ಅಂಗಡಿಯವನ ಗೋಳುಹೊಯ್ದುಕೊಳ್ಳುವ ಅವ್ವನು
ಅಪ್ಪನ ಬುಜದ ಮೇಲೆ ಕುಳಿತು ಜಾತ್ರೆ ನೋಡೋ ಮಕ್ಕಳು
ದೇವರ ರತವ ನೋಡಿರಣ್ಣ, ಎಳೆಯಲು ರೆಡಿಯಾಗಿರಣ್ಣ
ಗೋವಿಂದ ಗೋವಿಂದ ನಾಮಸ್ಮರಣೆ ಮಾಡಿರಣ್ಣ
ತೇರನ್ನು ಊರ ಕೇರಿಯವರೆಗೂ ಎಳೆದು ಹೋಗೋಣ
ಹಣ್ಣು ಕಾಯಿಚೂರು ಎಸೆಯುವಾಗ ಕೈಯ ಹಿಡಿಯೋಣ
ನಮ್ಮೂರ ಜಾತ್ರೆಯಣ್ಣ ಬನ್ನಿರಿ ನೀವೆಲ್ಲರೂ
ಹರುಶದಿಂದ ಸಂಬ್ರಮಿಸೋಣ ಒಂದಾಗಿ ನಾವೆಲ್ಲರೂ
( ಚಿತ್ರ ಸೆಲೆ: vijaykarnataka.indiatimes.com )
ಇತ್ತೀಚಿನ ಅನಿಸಿಕೆಗಳು