ಕವಿತೆ : ಜೀವ ತುಂಬೊ ಮಳೆಯೆ ಮುನಿದಿದೆ

ಶಾಂತ್ ಸಂಪಿಗೆ.

ನೆರೆ, Floods

ಇಳೆಗೆ ಜೀವಕಳೆಯ ನೀಡಿ
ಬೂರಮೆಗೆ ಹಸಿರು ತುಂಬಿ
ಜೀವರಾಶಿ ಹಸಿವ ತಣಿಸೊ
ಮಳೆ ಹನಿಗೆ ನೆರೆ ಹೆಸರು

ನಿತ್ಯ ವೈಬವದ ಬದುಕಿಗಾಗಿ
ಅತಿ ಆಸೆಗೆ ಸಾಕ್ಶಿಯಾಗಿ
ಅಗತ್ಯ ಮೀರಿ ಬಯಕೆ ಸಾಗಿದೆ
ಕೊನೆಯೆಂಬುದು ಎಲ್ಲಿದೆ

ಅನಂತ ಮೂಕ ಜೀವರಾಶಿ ಕೊಂದು
ಎಲ್ಲ ತಿಳಿದ ಬ್ರಮೆಯಲಿ ಮಿಂದು
ಮನುಶ್ಯತ್ವ ನಿತ್ಯ ನಂದಿದೆ
ಪ್ರಕ್ರುತಿಯು ಬಳಲಿ ಕುಂದಿದೆ

ಪ್ರಕ್ರುತಿ ಸಹಜ ಬದುಕು ಬೇಕು
ಕಾಡಿನ ಮಾರಣ ಹೋಮ ಸಾಕು
ವನ್ಯಜೀವಿಗಳು ಅಬಯದಿ ಉಳಿಬೇಕು
ಪಕ್ಶಿ ಸಂಕುಲ ಸ್ವಚ್ಚಂದ ಹಾರಬೇಕು

ಮನುಶ್ಯನ ವಿಕ್ರುತಿಗೆ ಪ್ರಕ್ರುತಿ ನೊಂದಿದೆ
ಜೀವ ತುಂಬೊ ಮಳೆಯೆ ಮುನಿದಿದೆ
ಮನ ಮನದಿ ಬದಲಾವಣೆ ಬಯಸಿದೆ
ಸರಳ ಸಹಜವಾಗಿ ಬದುಕು ಎಂದಿದೆ

ಮನುಶ್ಯ ಒಬ್ಬ ಬದುಕ ಅರಿತರೆ
ಪ್ರಕ್ರುತಿಗೆ ಪೂರಕ ಅನ್ವೇಶಣೆ ಮಾಡಿದರೆ
ನೆರೆ ತೊರೆಯು ಎಂದೂ ಬಾರದು
ಬರದ ಚಾಯೆ ಎಂದೂ ಸುಳಿಯದು

( ಚಿತ್ರ ಸೆಲೆ : bbc.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *