ಜೈವಿಕ ಕೀಟನಾಶಕಗಳು

– ಡಾ. ರಾಮಕ್ರಿಶ್ಣ ಟಿ.ಎಮ್.

planète terre écologie

ನಮ್ಮ ದೇಶದಲ್ಲಿ ಬೇಸಾಯದ ಬೆಳೆಗಳಲ್ಲಿ ರೋಗ ಬಾದೆಯನ್ನು ತಪ್ಪಿಸಲು ರಾಸಾಯನಿಕ ಕೀಟನಾಶಕಗಳಿಗಾಗಿ ವರ‍್ಶಕ್ಕೆ   10000 ಕೋಟಿ ಅತವಾ ಅದಕ್ಕಿಂತ ಹೆಚ್ಚುರೂಪಾಯಿಗಳು ವೆಚ್ಚವಾಗುತ್ತಿವೆ. ಇವುಗಳಿಂದ ಆಗುವ ಪರಿಸರ ಮಾಲಿನ್ಯ, ಹಣದ ಕರ‍್ಚು, ಮಾನವ ಮತ್ತು ಪ್ರಾಣಿಗಳಲ್ಲಾಗುವ ದುಶ್ಪರಿಣಾಮಗಳನ್ನು ಅವಲೋಕಿಸಿದರೆ ಜೈವಿಕ ಕೀಟನಾಶಕಗಳಿಗೇ ಮೊರೆಹೋಗುವುದು ಸೂಕ್ತವೆಂಬುದು ಅರಿವಾಗುತ್ತದೆ.

ನಮ್ಮ ದೇಶದಲ್ಲಿ ಸುಮಾರು 100 ಕೋಟಿ ಬೇಸಾಯ ಆದಾರಿತ ಕುಟುಂಬಗಳಿವೆ; ಪ್ರಪಂಚದಲ್ಲಿನ ರೈತರಲ್ಲಿ ಶೇಕಡ 25 ರಶ್ಟು. 1960 ದಶಕದ ನಂತರ ಆಹಾರ ಬೆಳೆಯುವ ಗತಿಯೇ ಬದಲಾಗಿದೆ. ಕಡಿಮೆ ಕಾಲದಲ್ಲಿ ಹೆಚ್ಚು ಬೆಳೆ ಬೆಳೆಯುವ ಅಪ್ರಾಕ್ರುತಿಕ ಕ್ರಿಯೆಯಿಂದಾಗಿ, ಪರಿಸರದ ಸಮತೋಲನ ಏರುಪೇರಾಗಿ ಇವು ತಂದೊಡ್ಡಿರುವ ಸಮಸ್ಯೆಗಳು ಹತ್ತಾರು. ಬೇಸಾಯದಲ್ಲಿ ನೀರಿನ ಸದ್ಬಳಕೆಯಾಗದೆ ಪಲವತ್ತಾದ ಬೂಮಿ ಮೇಲ್ಪದರ ಕಳಚಿಕೊಂಡು ಹೋಗಿ ಸವಕಳಿಯಾಗುತ್ತಿದೆ. ಇದರ ಜೊತೆಗೆ ರಾಸಾಯನಿಕ ಗೊಬ್ಬರಗಳು, ರಾಸಾಯನಿಕ ಕ್ರಿಮಿನಾಶಕಗಳು ಯತೇಚ್ಚವಾಗಿ ಬಳಕೆಯಾಗಿ ಪರಿಸರ ಮಲಿನವಾಗುತ್ತಿದೆ. ಈ ರಾಸಾಯನಿಕ ಕ್ರಿಮಿನಾಶಕಗಳು ಆಹಾರದ ಸರಪಳಿಯನ್ನು ಸೇರುತ್ತವೆ. ಆಹಾರ ಸರಪಳಿಯಲ್ಲಿ ಸಹಜವಾಗಿ ಒಂದು ಜೀವಿ ಇನ್ನೊಂದು ಜೀವಿಯ ಆಹಾರವಾಗುತ್ತದೆ. ಆಹಾರ ಸರಪಳಿಯ ಕೊನೆಯ ಹಂತದಲ್ಲಿರುವ ಜೀವಿಗಳಾದ ಮನುಶ್ಯ ಅತವಾ ಇತರೆ ಪಕ್ಶಿ, ಸಸ್ತನಿ, ಪ್ರಾಣಿಗಳಲ್ಲಿ ರೋಗನಾಶಕಗಳು ಶೇಕರವಾಗಿ  ಗುಣಪಡಿಸಲಾಗದ ರೋಗವನ್ನುಂಟುಮಾಡುತ್ತವೆ.

ಇಂತಹ ವಿಶಮ ಪರಿಸ್ತಿತಿಯಲ್ಲಿ ನಮ್ಮ ಬಾರತದಲ್ಲಿ ಎರಡನೇ ಹಸಿರು ಕ್ರಾಂತಿಯ ರೂಪುರೇಕೆಗಳು ತಯಾರಿ ಆಗಬೇಕಾಗಿದೆ. ಹೆಚ್ಚು ಬೆಳೆಯುವುದರ ಜೊತೆಗೆ ಪರಿಸರ ಮಾಲಿನ್ಯ ತಡೆಯಲು ರಾಸಾಯನಿಕ ಕೀಟನಾಶಕಗಳ ಬದಲಿ ವ್ಯವಸ್ತೆ ಮಾಡುವುದು ಇಂದಿನ ಜರೂರು ವಿಶಯವಾಗಿದೆ.

ರಾಸಾಯನಿಕ ಕ್ರಿಮಿನಾಶಕಗಳು:

ಬೇಸಾಯದ ಬೆಳೆಗಳಲ್ಲಿ ಕೀಟ, ಬ್ಯಾಕ್ಟೀರಿಯಾ, ಬೂಶ್ಟು,ವೈರಸ್ ಮತ್ತು ನೆಮಟೋಡುಗಳು ರೋಗಗಳುಂಟುಮಾಡುತ್ತವೆಂಬುದು ಸರ‍್ವವಿದಿತ.

ಈ ರೋಗಕಾರಕಗಳನ್ನು ಹತೋಟಿಯಲ್ಲಿಡಲು ಇಲ್ಲಿಯವರೆಗೆ ರಾಸಾಯನಿಕ ರೋಗನಾಶಕಗಳನ್ನು ಬಳಸಲಾಗುತ್ತಿದೆ. ಈ ರಾಸಾಯನಿಕ ರೋಗನಾಶಕಗಳನ್ನು ಒಟ್ಟು ಐದು ಗುಂಪುಗಳನ್ನಾಗಿ ವಿಂಗಡಿಸಬಹುದು.

Ø ಆರ‍್ಗೆನೋಕ್ಲೋರೈಡ್ಗಳು-ಬಿಹೆಚ್ಸಿನ,ಡಿಡಿಟಿ,ಡೈಎಲ್ಡ್ರಿನ್, ಎಂಡೋಸಲ್ಪಾನ್

Ø ಆರ‍್ಗೆನೋಪಾಸ್ಪೇಟ್ಗಳಳು-ಮ್ಯಾಲತಿಯಾನ್ಮುಂತಾದವುಗಳು.

Ø ಕಾರ‍್ಬಮೇಟ್ಸಗಳು- ಕಾರ‍್ಬ್ಯಾ ರಿಲ್, ಕಾರ‍್ಬೋ ಪ್ಯೂರಾನ್ ಮುಂತಾದವು.

Ø ಪೈರಿತ್ರಾಯಿಡ್ಗಟಳು-ಪೈರಿತ್ರಿನ್

Ø ಟ್ರೈ ಅಜೈನ್ಸ್- ಸಿಮಜೈನ್, ಅಟ್ರಜೈನ್ ಮುಂತಾದವು.

ಕ್ಲೋರಿನೇಟೆಡ್ ಹೈಡ್ರೋಕಾರ‍್ಬೋನೇಟ್ಗುಳ ಗುಂಪಿಗೆ ಸೇರಿದ(ಅತವಾ ಆರ‍್ಗೆನೋ ಕ್ಲೋರೈಡ್ಗಾಳು) ಡಿ.ಡಿ.ಟಿ.ಯನ್ನು 1940ರ ಸರಿಸುಮಾರಿಗೆ ಪಾಲ್ ಮಿಲ್ಲರ್ ಎಂಬ ರಸಾಯನಿಕ ವಿಜ್ನಾನಿ ಮೊದಲ ಬಾರಿಗೆ ಸಂಯೋಜಿಸಿದ. ಈ ಡಿ.ಡಿ.ಟಿ.ಗೆ ಎಲ್ಲಾ ವಿದದ ಕೀಟಗಳನ್ನು ನಾಶಗೊಳಿಸುವ ಶಕ್ತಿಯಿರುವುದರಿಂದ ಬಳಸಲಾಯಿತು. ಪರಿಣಾಮ? ಇದು, ಹಾಲು, ಮಾಂಸ, ನೀರು ಮುಂತಾದವುಗಳಲ್ಲಿ ಉಳಿದು ಕೊನೆಗೆ ಮನುಶ್ಯನಲ್ಲಿ ಶೇಕರಣೆಯಾಗಿ ರೋಗವನ್ನುಂಟುಮಾಡಿತು. ಈಗ ಎಚ್ಚೆತ್ತುಕೊಳ್ಳಬೇಕಾಯಿತು.ಡಿಡಿಟಿಯನ್ನು ಅಮೇರಿಕಾ, ಸ್ವೀಡನ್, ಇಂಗ್ಲೆಂಡ್ ಹೀಗೆ ಹಲವಾರು ಪಾಶ್ಚಾತ್ಯ ದೇಶಗಳಲ್ಲಿ ನಿಶೇದಿಸಲಾಗಿದೆ. ನಮ್ಮ ದೇಶದಲ್ಲಿಯೂ ಸಹ ಬಾಗಶಹ ನಿಶೇದಿ. ಆದರೂ ಎಲ್ಲ ಮನೆಗಳಲ್ಲಿ ಇರುವೆಗಳನ್ನು ಹತೋಟಿಯಲ್ಲಿಡಲು ಈಗಲೂ ಡಿ.ಡಿ.ಟಿ.ಗೆ ಮೊರೆಹೋಗುತ್ತಿದ್ದೇವೆ. ಈಗ ಡಿ.ಡಿ.ಟಿಯನ್ನು ಹೆಚ್ಚು ಬಳಸಿದ ಕಾರಣದಿಂದಾಗಿ ಹಲವಾರು ಕೀಟಗಳು ಡಿ.ಡಿ.ಟಿ ನಿರೋದಕ ಶಕ್ತಿಯನ್ನು ಪಡೆದುಕೊಂಡಿವೆ. ಬಾರತದಲ್ಲಿ ಸುಮಾರು 1960 ರಿಂದ 70ರ ವರೆಗೆ ಡಿ.ಡಿ.ಟಿ ಸಿಂಪಡಿಸಿ ಮಲೇರಿಯಾ ರೋಗಕಾರಕ ಸೊಳ್ಳೆಗಳನ್ನು ನಿಯಂತ್ರಿಸುತ್ತಿದ್ದರು. ಈಗ ಅನಾಪಿಲಿಸ್ ಸೊಳ್ಳೆಗಳು ಡಿ.ಡಿ.ಟಿ ಯ ಜತೆಗೆ ಬಿ.ಹೆಚ್.ಸಿ, ಮ್ಯಾಲತಿಯಾನ್,ಮತ್ತು ಪೆನಿಟ್ರೊತಿಯಾನ್ಗುಳಿಗು ಸಹ ರೋಗನಿರೋದಕ ಶಕ್ತಿಯನ್ನು ಪಡೆದುಕೊಂಡಿವೆ. ಕೀಟಗಳು ನಿರೋದಕ ಶಕ್ತಿಯನ್ನು ಗಳಿಸಿಕೊಂಡದ್ದರಿಂದ, ರೈತರು ಹೆಚ್ಚು ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸಬೇಕಾಗಿದೆ.

ಕೀಟನಾಶಕಗಳನ್ನು ಅವುಗಳ ಪರಿಸರದಲ್ಲಿ ಕೊಳೆಯದೇ ಉಳಿಯುವ ಗುಣಗಳಿಗೆ ಅನುಗುಣವಾಗಿ 3 ಗುಂಪುಗಳಾಗಿ ವಿಂಗಡಿಸಲಾಗುತ್ತದೆ.

Ø ಕೊಳೆಯಲು ಒಂದರಿಂದ ಒಂದೂವರೆ ವರ‍್ಶಕಾಲ ಬೇಕಾಗುವ ಕೀಟನಾಶಕಗಳು-2, 4-ಡಿ ಮತ್ತು ಅಟ್ರಿಜೈನ್ ಮುಂತಾದವು; 2,4-ಡಿಯನ್ನು ಕಳೆನಾಶಕವಾಗಿ ಬಳಸುತ್ತಾರೆ.

Ø ಕೊಳೆಯಲು 20-ವರ‍್ಶಗಳಿಗೂ ಮೇಲ್ಪಟ್ಟು ಕಲ ಬೇಕಾಗುವ ಕೀಟನಾಶಕಗಳು-ಡಿ.ಡಿ.ಟಿ, ಆಲ್ಡ್ರಿನ್, ಡೈಎಲ್ಡ್ರಿನ್, ಎಂಡ್ರಿನ್, ಹೆಪ್ಟಕ್ಲೋರ್, ಎಂಡೋಸಲ್ಪಾನ್, ಟಾಕ್ಸೋಪೀನ್ ಮುಂತಾದವು.

Ø ಯಾವ ಬದಲಾವಣೆಯು ಆಗದೆ ಇರುವ ಕೀಟನಾಶಕಗಳು: ಲೆಡ್(ಸೀಸ), ಮರ್‍ಕ್ಯುರಿ (ಪಾದರಸ), ಆರ್‍ಸೆನಿಕ್ ಮುಂತಾದವು.

ಈ ಕೀಟನಾಶಕಗಳನ್ನು ಎರಡು ದ್ರುಶ್ಟಿಯಿಂದ ನೋಡಬಹುದು. ಒಂದು, ಬೇಸಾಯದ ಬೆಳೆಗಳ ರೋಗಗಳನ್ನು ನಿಯಂತ್ರಿಸಿ ಹೆಚ್ಚು ಬೆಳೆಯಲು ಅನುಕೂಲವಾಗುತ್ತದೆ. ಇನ್ನೊಂದು, ಕೀಟನಾಶಕಗಳು ಸಾಮಾನ್ಯವಾಗಿ  ವಿಶಗಳು; ನಿದಾನವಾಗಿ ನಮ್ಮ ಪರಿಸರ ವ್ಯವಸ್ತೆಯನ್ನು ನಾಶಗೊಳಿಸುತ್ತವೆ. ಹಾಗಿದ್ದಲ್ಲಿ ಅವುಗಳಿಂದ ಎಶ್ಟು ಸುರಕ್ಶ ತೆಯಿದೆ? ಗಂಬೀರ ಸಮಸ್ಯೆಯೆಂದರೆ ಎಲ್ಲಾ ಆರ‍್ಗೆನೋ ಕ್ಲೊರೀನ್ ರೋಗನಾಶಕಗಳು ಪ್ರಾಣಿಗಳ ಕೊಬ್ಬಿನಲ್ಲಿ ಶೇಕರವಾಗುವುದು. ಹಾಲು, ಮಾಂಸ,ಹಣ್ಣು ತರಕಾರಿಗಳಲ್ಲಿ ಶೇಕರವಾಗಿ ಕೊನೆಗೆ ಇವುಗಳನ್ನು ಒಪಯೋಗಿಸುವ ಮಾನವರಲ್ಲಿ ಶೇಕರವಾಗುತ್ತವೆ. ಪರಿಣಾಮ? ಯಕ್ರುತ್ ಮತ್ತು ಮೂತ್ರಜನಕಾಂಗದ ಕಾಯಿಲೆಗಳು ತಲೆದೋರುತ್ತವೆ. ಡಿ.ಡಿ.ಟಿ ಯು ನೀರಿನಲ್ಲಿರುವುದಕ್ಕಿಂತ 1,000,000 ಪಟ್ಟು ಮೀನಿನಲ್ಲಿ ಶೇಕರವಾಗಿರುತ್ತದೆ. ಇಂತಹ ಮೀನುಗಳನ್ನು ತಂದು ಬದುಕುವ ಪಕ್ಶಿಗಳ ಮುಟ್ಟೆಗಳು ವೀರ‍್ಯಾಣುವಿನ ಜೊತೆ ನಿಶೇಚನವಾಗುವುದಕ್ಕೆ ಮೊದಲೇ ನಾಶವಾಗುತ್ತವೆ. ಈ ಕಾರಣದಿಂದಾಗಿ ಜುಟ್ಟಿಲ್ಲದ ಹದ್ದುಗಳ ನಾಶ ಅಮೇರಿಕಾ ದೇಶದಲ್ಲಿ ಕಡಿಮೆಯಾಯಿತೆಂದು ಅದ್ಯಯನಗಳು ತಿಳಿಸುತ್ತವೆ.

ಇವಲ್ಲದೆ ಕೀಟನಾಶಕಗಳು ಡಿಎನ್ಎತ  ಎಂಬ ಜೀವರಸಾಯನಿಕ ವಸ್ತುವಿನಲ್ಲಿ ವಿಕ್ರುತಿ ಉಂಟುಮಾಡುತ್ತವೆ. ಡಿಎನ್ಎೇ ಜೀವರಸಾಯನವು ಅನುವಂಶೀಯ ಗುಣಗಳನ್ನು ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುವ ಕೆಲಸ ನಿರ‍್ವಹಿಸುತ್ತದೆ. ಇದು ದೇಹದ ಪ್ರತಿಯೊಂದು ಜೀವಕೋಶದ ನ್ಯೂಕ್ಲಿಯಸ್ನಯಲ್ಲಿರುತ್ತದೆ. ಹತ್ತಾರು ವರ‍್ಶಗಳ ಕಾಲ ಗೋಡಂಬಿ ಬೆಳೆಯಲ್ಲಿ ಕೀಟಗಳ ಬಾದೆಯನ್ನು  ತಪ್ಪಿಸಲು ಎಂಡೋಸಲ್ಪಾನ್ ಬಳಸಿದ ಕಾರಣದಿಂದ ಕೇರಳ ಮತ್ತು ಕರ‍್ನಾಟಕದ ಗಡಿಯ ಕಾಸರಗೋಡಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನೂರಾರು ಮಕ್ಕಳಲ್ಲಿ ಅನುವಂಶೀಯ ತೊಂದರೆಗಳಾಗಿವೆ. ಈ ಮಕ್ಕಳು ಇಡೀ ಜೀವಿತಾವದಿಯಲ್ಲಿ ಬೇರೆಯವರನ್ನು ಆಶ್ರಯಿಸಬೇಕಾದ ಪರಿಸ್ತಿತಿಯಾಗಿದೆ.

ಜೈವಿಕ ನಿಯಂತ್ರಣೆ:

ರೋಗಕಾರಕ ಜೀವಿಗಳನ್ನು ಇತರ ಪ್ರಕ್ರುತಿ ಸಹಜ ಜೀವಿಗಳಿಂದ ನಿಯಂತ್ರಿಸುವುದಕ್ಕೆ ‘ಜೈವಿಕ ನಿಯಂತ್ರಣೆ’ ಎಂದು ಕರೆಯುತ್ತಾರೆ. ಹೀಗೆ ನಿಯಂತ್ರಿಸಲು ಬಳಸುವ ಜೀವಿಗಳು, ಪರೋಪಜೀವಿಗಳಾಗಿತ್ತವೆ ಅತವಾ ರೋಗಕಾರಕ ಜೀವಿಗಳಲ್ಲಿ ರೋಗವನ್ನುಂಟುಮಾಡುತ್ತವೆ. ಕ್ರಿ.ಪೂ.7000 ದಲ್ಲಿಯೇ ಕ್ರುಶಿಯಲ್ಲಿ ಜೈವಿಕ ರೋಗನಾಶಕಗಳ ಬಳಕೆ ಇತ್ತೆಂದು ತಿಳಿಯುತ್ತದೆ. ಅಂದು ರೈತರು ಸಸ್ಯಗಳ ವಿವಿದ ಪ್ರಬೇದಗಳನ್ನು ಬಳಸಿ ಕೀಟಗಳನ್ನು ನಿಯಂತ್ರಿಸುತ್ತಿದ್ದರೆಂದು ತಿಳಿದುಬರುತ್ತದೆ.

ಜೈವಿಕ ಕೀಟನಾಶಕಗಳಾಗಿ ಸಸ್ಯಗಳು:

ಸುಮಾರು ಆರುನೂರಕ್ಕೂ ಹೆಚ್ಚು ಸಸ್ಯಪ್ರಬೇದಗಳನ್ನು ಬಳಸಿ ರೋಗಕಾರಕ ಜೀವಿಗಳನ್ನು ನಿಯಂತ್ರಣದಲ್ಲಿಡಬಹುದು. ಇಂತಹ ಜೈವಿಕ ಕ್ರಿಮಿನಾಶಕಗಳಲ್ಲಿ ಬೇವಿನ ಸಸ್ಯಕ್ಕೆ ಅಗ್ರಸ್ತಾನ. ಇದೊಂದು ಪರಿಸರ ಸ್ನೇಹಿ. ಬೇವಿನ ಸಸ್ಯದಿಂದ ಅನೇಕ ಕೀಟನಾಶಕಗಳನ್ನು ಈಗಾಗಲೇ ತಯಾರಿಸಲಾಗುತ್ತಿದೆ. ಅವುಗಳಲ್ಲಿ ಅಜೆಡೆರಿಕ್ಟಿನ್ಕೂಡ ಒಂದು. ಇತರ ರಾಸಾಯನಿಕ ವಸ್ತುಗಳೆಂದರೆ ನಿಂಬಿನ್, ಸಲಾನಿನ್ ಮತ್ತು ಮೆಯಂಟ್ರಿಯಾಲ್ಮುಂತಾದವುಗಳು.ಬೇವಿನ ಸಸ್ಯದಿಂದ ಸುಮಾರು ಇನ್ನೂರಕ್ಕೂ ಹೆಚ್ಚು ಬೇಸಾಯ ಬೆಳೆಗಳಲ್ಲಿನ ರೋಗಗಳನ್ನು ನಿಯಂತ್ರಿಸಬಹುದಾಗಿದೆ. ಅವುಗಳಲ್ಲಿ ಕಡಲೆಕಾಯಿಯ ಬೇರು ಕೊಳೆಯುವ ರೋಗ, ಸೆಣಬಿನ ಕಾಂಡ ಕಲೊಳೆಯುವ ರೋಗ, ಬದನೆಯ ಬೇರು ಕೊಳೆಯುವ ರೋಗ, ಈರುಳ್ಳಿ ಕೊಳೆಯುವ ರೋಗ, ಮೆಣಸಿನಕಾಯಿ ಮತ್ತು ಟೊಮ್ಯಾಟೋಗಳ ಎಲೆಸುತ್ತು ರೋಗಗಳನ್ನು ಸಂಪೂರ‍್ಣವಾಗಿ ಹತೋಟಿಯಲ್ಲಿಡಬಹುದೆಂದು ಈಗಾಗಲೇ ಸಾಬೀತಾಗಿದೆ. ನಮ್ಮ ದೇಸದಲ್ಲಿ ಸುಮಾರು 16 ದಶಲಕ್ಶ  ಬೇವಿನ ಮರಗಳಿವೆಯೆಂದು ಅಂದಾಜು; ಬೇವಿನ ಎಲೆ, ಬೀಜ, ತೊಗಟೆಯನ್ನು ಕೀಟನಾಶಕಗಳನ್ನಾಗಿ ಬಳಸಲಾಗುತ್ತಿದೆ.

ಚಂಡುಮಲ್ಲಿಗೆ ಸಸ್ಯಗಳು ಅನೇಕ ಕೀಟಗಳನ್ನು ದೂರವಿಡುತ್ತವೆ. ಬೇಸಾಯದ ಬೆಳೆಗಳ ಜತೆಯಲ್ಲಿ ಚಂಡುಮಲ್ಲಿಗೆ ಬೆಳೆದು ಬೇಸಾಯದ ಬೆಳೆಗೆ ಬರುವ ರೋಗಗಳನ್ನು ನಿವಾರಿಸಬಹುದು. ಬಟಾಣಿ,ಆಲೂಗಡ್ಡೆ ಮತ್ತು ಟೊಮ್ಯಾಟೋಗಳಲ್ಲಿನ ಎಲೆಸುತ್ತು ಕಂದು ಬೂದು ರೋಗವನ್ನು, ಬೆಂಡೆಕಾಯಿ, ಪಪಾಯ, ದತ್ತುರ, ಕಣಗಿಲೆ, ಪುದೀನ, ಮತ್ತು ಮುಳ್ಳಿನದಂಟು ಎಲೆಗಳ ರಸದಿಂದ ಹತೋಟಿಯಲ್ಲಿಟಬಹುದು. ಬತ್ತಕ್ಕೆ ಬರುವ ಕಂದುಚುಕ್ಕೆ ರೋಗವನ್ನು; ಸಾಸಿವೆ ಗಿಡ, ಕ್ರೊಟನ್ ಗಿಡ ಮತ್ತು ಗೆಣಸು ಎಲೆಗಳ ರಸವನ್ನು ಬಳಸಿ ನಿವಾರಿಸಬಹುದು. ತುಳಸಿ ಎಲೆಯ ರಸದಿಂದ ಟೊಮ್ಯಾಟೋ ಮತ್ತು ಹಸಿಮೆಣಸಿನಕಾಯಿ  ಗಿಡದ ರೋಗವನ್ನು ನಿಯಂತ್ರಿಸಬಹುದೆಂದು ಕ್ರುಶಿ ತಜ್ನರ ಸಂಶೋದನೆಗಳು ದ್ರುಡಪಡಿಸಿವೆ.

ತೆಂಗಿನ ಎಲೆಯ ರಸದಿಂದ ಬಾಳೆ ಎಲೆಸುತ್ತು ರೋಗವನ್ನು ಮತ್ತು ನುಗ್ಗೆ, ಮದುಕ ಇಂಡಿಕ, ವಿಂಕಾ ರೋಜಿಯಾ, ಸಿಟ್ರೋನೆಲ್ಲಾಹುಲ್ಲು, ಹೊಗೆಸೊಪ್ಪು ಎಲೆಗಳ ರಸದಿಂದ ಅನೇಕ ಹಣ್ಣು ಮತ್ತು ತರಕಾರಿ ಸಸ್ಯಗಳ ರೋಗಗಳನ್ನು ತಹಬದಿಗೆ ತರಬಹುದಾಗಿದೆ. ಜೋಳ ಮತ್ತು ಹತ್ತಿ ಬೆಳೆಯ ಎರಡು ಸಾಲುಗಳ ಮದ್ಯೆ ಗೆಣಸನ್ನು ಬೆಳೆಯುವುದರಿಂದ ಗೆಣಸು ಕೀಟಗಳನ್ನು ಆಕರ‍್ಶಿಸಿ ಜೋಳ ಮತ್ತು ಹತ್ತಿಗೆ ಯಾವ ರೋಗಗಳೂ ಬರದಂತೆ ಕಾಪಾಡುತ್ತವೆ.

ರೋಗನಿಯಂತ್ರಣೆಯಲ್ಲಿ ಸೂಕ್ಶ್ಮಜೀವಿಗಳು:

 ಸುಮಾರು 11,000 ವಿವಿದ ಪ್ರಬೇದದ ಕೀಟ, ವೈರಸ್ಸು, ಬ್ಯಾಕ್ಟೀರಿಯಾ, ಬೂಶ್ಟು, ಪ್ರೊಟೋಜೀವಿ, ರಿಕೇಟ್ಸಿಯಾ(ಒಂದು ವಿದದ ಬ್ಯಾಕ್ಟೀರಿಯಾ) ಮತ್ತು ನೆಮಟೋಡುಗಳು ರೋಗ ನಿಯಂತ್ರಣೆ ಕಾರ‍್ಯದಲ್ಲಿ ನೆರವಿಗೆ ಬರುತ್ತವೆ. ಇವು ಸಾಮಾನ್ಯವಾಗಿ ಪರಾವಲಂಬಿಗಳು. ಕಪ್ಪೆ ಮತ್ತು ಜೇಡಗಳು ಸಹ ಕೀಟ ನಿಯಂತ್ರಣೆಯಲ್ಲಿ ಮುಕ್ಯಪಾತ್ರವನ್ನು ವಹಿಸುತ್ತವೆ. ಈ ಜೇಡಗಳಿಗೆ ಸುಮಾರು 90ರಶ್ಟು ರೋಗಕಾರಕ ಕೀಟಗಳನ್ನು ನಿಯಂತ್ರಿಸುವ ಶಕ್ತಿಯಿದೆಯೆಂದು ಹೇಳುತ್ತಾರೆ. ಜೇಡಗಳನ್ನು ಬೇಸಾಯ ಬೂಮಿಯಲ್ಲಿ ಸಣ್ಣ ಸಣ್ಣ ಹಳ್ಳಗಳನ್ನು ಮಾಡಿ ವ್ರುದ್ದಿಸಬಹುದು. ಈ ಜೇಡಗಳನ್ನು ಬಳಸಿ ಹತ್ತಿ ಬೆಳೆಯಲ್ಲಿ ಕೀಟಗಳನ್ನು ನಿಯಂತ್ರಿಸಲಾಗುತ್ತಿದೆ. ಇದರಿಂದ ರಾಸಾಯನಿಕ ಕೀಟನಾಶಕಗಳ ಬಳಕೆಯಲ್ಲಿ ಶೇಕಡ 60ರಶ್ಟು ಉಳೀಸಲು ಸದ್ಯವೆಂದು ಕಂಡುಬಂದಿದೆ. ಒಂದು ತೋಳ ಜೇಡವು ಒಮ್ಮೆಗೆ 10 ರಿಂದ 12 ಕಂದು ಬಣ್ಣದ ಜಿಗಿಯುವ ಕೀಟಗಳನ್ನು ತಿಂದು ಜೀರ‍್ಣಿಸಿಕೊಳ್ಳುತ್ತದೆ. ಈ ಕಂದು ಬಣ್ಣದ ಜಿಗಿಯುವ ಕೀಟಗಳು ಏಶ್ಯಾದ ಬತ್ತ ಬೆಳೆಯುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.

ಹತ್ತಿ, ಮೆಕ್ಕೆಜೋಳ, ಸೇಬು ಮತ್ತು ಅವೋಕಾಡೋಸಸ್ಯಗಳಲ್ಲಿನ ಮಿಡತೆಗಳನ್ನು ಹತೋಟಿಯಲ್ಲಿಡಲು ಟ್ರೈಕೋಗಾಮ ಎಂಬ ಕಣಜಹುಳುವಿನ ಪ್ರಬೇದವನ್ನು ಬಳಸುತ್ತಾರೆ. ಟ್ರೈಕೋಗಾಮ ಕಿಲೋನಿನ್ ಎಂಬ ಪ್ರಬೇದವನ್ನು ಕಬ್ಬನ್ನು ಕೊರೆಯುವ ಕೀಟವನ್ನು ನಿಯಂತ್ರಿಸಲು ಬಳಸುತ್ತಾರೆ. ಹತ್ತಿ ಹಣ್ಣು ಮತ್ತು ಬಾದಾಮಿಗಳನ್ನು ತಿಂದು ನಾಶಗೊಳಿಸುವ ಕಾರ‍್ಪೆಂಟರ್ ನೊಣಗಳನ್ನು ನಿಯಂತ್ರಿಸಲು ನ್ಯೂಪ್ಲೇಟಿನಾ ಕಾರ‍್ಪೊಕ್ಯಾಪ್ಸೆ ಕೀಟವನ್ನು ಬಳಸಬಹುದಾಗಿದೆ. ಈ ನ್ಯೂಪ್ಲೇಟಿನಾ ಕೀಟವು ಕಾರ‍್ಪೆಂಟರ್ ನೊಣದ ಮೇಲೆ ಪರಾವಲಂಬಿಯಾಗಿ ಬದುಕುತ್ತದೆ.

ಸ್ಟನೆರ‍್ನಿಮಾ ಮತ್ತು ಹೆಟಿರೋರಾಬ್ಡೈಟಿಸ್ ಎಂಬ ನೆಮಟೋಡುಗಳ ಕರುಳಿನಲ್ಲಿ, ಅನೇಕ ರೋಗ ಉಂಟು ಮಾಡುವ ಬ್ಯಾಕ್ಟೀರಿಯಾಗಳು ಸಹಜವಾಗಿ ಮನೆ ಮಾಡಿಕೊಂಡಿರುತ್ತವೆ. ಅನೇಕ ಕೀಟಗಳು ನೆಮಟೋಡುಗಳನ್ನು ತಿಂದು ಜೀರ‍್ಣಿಸಿಕೊಳ್ಳುತ್ತವೆ. ಹೀಗೆ ನೆಮಟೋಡುಗಳನ್ನು ತಿಂದ ಕೀಟಗಳು ಕೂಡಲೇ ಸಾಯುತ್ತವೆ. ಇದಕ್ಕೆ ಕಾರಣ ನೆಮಟೋಡುಗಳಲ್ಲಿನ ಬ್ಯಾಕ್ಟೀರಿಯಾಗಳು, ಕೀಟಗಳಲ್ಲಿ ರೋಗವನ್ನುಂಟು ಮಾಡುತ್ತವೆ.

ಮತ್ತೊಂದು ಪರಿಣಾಮಕಾರಿ ವಿದಾನವೆಂದರೆ, ಗಾಮಾಕಿಣಗಳನ್ನು ಬಳಸಿ ರೋಗಕಾರಕ ಗಂಡು ಕೀಟಗಳನ್ನು ನಿರ‍್ವೀರ‍್ಯಗಳನ್ನಾಗಿ ಮಾಡಿ ಅವುಗಳ ಸಂಕ್ಯೆಯನ್ನು ನಿಯಂತ್ರಿಸುವುದು.

ಜೈವಿಕ ತಂತ್ರಜ್ನಾನ ಕೀಟ ನಿಯಂತ್ರಣೆ:

ಅನೇಕ ಸೂಕ್ಶ್ಮಜೀವಿಗಳು ನಿರ‍್ದಿಶ್ಟ ಕೀಟಗಳನ್ನು ಮಾತ್ರ ಕೊಲ್ಲುತ್ತವೆ. ಇಂತಹ ಸೂಕ್ಶ್ಮಜೀವಿಗಳನ್ನು ಜೈವಿಕ ತಂತ್ರಜ್ನಾನದಿಂದ ವ್ರುದ್ದಿಸಿ, ಶೇಕರಿಸಿಟ್ಟು, ಬೇಕಾದಾಗ ಬಳಸಬಹುದು. ಹಲವಾರು ಬ್ಯಾಕ್ಟೀರಿಯಾ, ವೈರಸ್ಸು ಮತ್ತು ಬೂಶ್ಟುಗಳನ್ನು ಜೈವಿಕ ನಿಯಂತ್ರಿಗಳಾಗಿ ಬಳಸುತ್ತಾರೆ. ಬ್ಯಾಸಿಲಸ್ ತುರಿಂಜಿಯೆನ್ಸಿಸ್ ಎಂಬ ಬ್ಯಾಕ್ಟೀರಿಯಾ ಒಂದು ವಿಶಕಾರಕ ಪ್ರೊಟೀನನ್ನು ಅದರ ಕೋಶದಲ್ಲಿ ತಯಾರಿಸುತ್ತದೆ. ಇಂತಹ ವಿಶವುಳ್ಳ ಕೋಶಗಳನ್ನು ತಿಂದ ಕೀಟವು ಸಾಯುತ್ತದೆ. ಇದನ್ನು ಸಾಮಾನ್ಯವಾಗಿ ಬಿಟಿಯೆಂದು ಕರೆಯುತ್ತಾರೆ. ಪಾಶ್ಚಾತ್ಯ ದೇಶಗಳಲ್ಲಿ ಈ ಬಿಟಿಯನ್ನು ಹಲವಾರು ದಶಕಗಳಿಂದಲೇ ಬಳಸುತ್ತಾ ಬಂದಿದ್ದಾರೆ. ಈ ಬಿಟಿಗಳನ್ನು ರೇಶ್ಮೆ ಬೆಳೆಗೆ ತೊಂದರೆ ಕೊಡಬಹುದೆಂದು 1991ರವರೆಗೆ ಕೀಟನಾಶಕವಾಗಿ ಬಳಸಲು ಅನುಮತಿ ಕೊಟ್ಟಿರಲಿಲ್ಲ. ನಮ್ಮ ದೇಶದಲ್ಲಿ ಈ ಬಿಟಿಯ ಅನೇಕ ತಳಿಗಳನ್ನು ತಯಾರಿಸಿದ್ದಾರೆ. ಇದನ್ನು ವ್ಯಾವಹಾರಿಕವಾಗಿ ತುರಿಸೈಡ್ ಹೆಚ್‌ಪಿ, ಬಯೋಟ್ರಾಲ್ ಬಿಟಿಬಿ ಎಂಬ ವಿವಿದ ಹೆಸರುಗಳಲ್ಲಿ ಕರೆಯುತ್ತಾರೆ.

ಆಸ್ಪರ್ ಜಿಲ್ಲಸ್ ನೈಜûರ‍್(ಎಎನ್-27) ಎಂಬ ಬೂಶ್ಟನ್ನು ಬಳಸಿ ಕುಂಬಳ ಸಸ್ಯದ ಎಲೆಸೊರಗು ರೋಗವನ್ನು ಹತೋಟಿಯಲ್ಲಿಡಬಹುದೆಂದು ತೋರಿಸಿದ್ದಾರೆ. ಈ ಎಲೆಸೊರಗು ರೋಗವು ಸಾಮಾನ್ಯವಾಗಿ ಕಂಡುಬರುವ ಒಂದು ದೊಡ್ಡ ಸಮಸ್ಯೆಯೆಂದು ಪರಿಗಣಿಸಲಾಗಿದೆ.

ಬ್ಯಾಕ್ಯುಲೋ ವೈರಸ್ಸುಗಳನ್ನು ಜೈವಿಕ ಕೀಟನಾಶಕಗಳಾಗಿ ಬಳಸುತ್ತಾರೆ. ಈ ವೈರಸ್ಸುಗಳನ್ನು ಒಂದು ಅರಳಿನಂತಿರುವ ವಸ್ತುವಿನಲ್ಲಿ ಸೇರಿಸಿ ಅವುಗಳ ಜೈವಿಕ ಗುಣಗಳನ್ನು ಕಾಪಾಡಬಹುದಾಗಿದೆ. ಇವುಗಳನ್ನು ಮಾರುಕಟ್ಟೆಯಲ್ಲಿ ವ್ಯವಹಾರಿಕವಾಗಿ ಜೈನಾಬ್-ಟಿ ಮತ್ತು ಪಿಜಿ-ಸಸ್ಪೆನ್ಶನ್ ಎಂದು ಕರೆಯುತ್ತಾರೆ. ಇದನ್ನು ಸ್ಯಾನ್ಡೋಜ್ ಕಂಪೆನಿಯು ಎಲ್ಕಾರ್ ಎಂಬ ಹೆಸರಿನಲ್ಲಿ 1975ರಿಂದಲೇ ಮಾರಾಟ ಮಾಡುತ್ತಿದೆ. ಎನ್‍ಪಿವಿ ನ್ಯೂಕ್ಲಿಯಾರ್ ಪಾಲಿ ಹೆಡ್ರೋಸಿಸ್ ವೈರಸ್ ಮತ್ತು ಗ್ರಾನ್ಯುಲೋಸಿಸ್ ವೈರಸ್‍ಗಳು ಇತರೆ ಮುಕ್ಯವಾದ ಕೀಟನಿಯಂತ್ರಕ ವೈರಸ್‌ಗಳು

ಬಾವೇರಿಯಾ ಬೆಸಿಯಾನ, ವರ‍್ಟಿಸಿಲಿಯಮ್ ಲೆಕನೈ ಮತ್ತು ಹಿರ‍್ಸು ಟಿಲ್ಲಾ ತಾಮ್ಸೋನಿಯೈಎಂಬ ಬೂಸ್ಟಗಳನ್ನು ಜೈವಿಕ ತಂತ್ರಜ್ನಾನದಿಂದ ವ್ರುದ್ದಿಸಬಹುದಾಗಿದೆ. ಇವುಗಳನ್ನು ಸಹ ಕೀಟನಿಯಂತ್ರಣೆಯಲ್ಲಿ ಬಳಸಲಾಗುತ್ತಿದೆ. ಈ ಬೂಶ್ಟಗಳು ಮಾರುಕಟ್ಟೆಯಲ್ಲಿ ಬಾವೇರಿಯನ್ ಮತ್ತು ಮೆಟಾಕ್ವಿನೋ ಎಂಬ ಮಾರಾಟದ ಹೆಸರಿನಲ್ಲಿ ಸಿಗುತ್ತವೆ. ಇವಲ್ಲದೆ ಇತರೆ ಕೀಟ ನಿಯಂತ್ರಕ ಬೂಶ್ಟ್‌ಗಳೆಂದರೆ, ಟ್ರೈಕೋಡರ‍್ಮ್ ಹರ‍್ಜಿಯಾನಮ್ ಮತ್ತು ಗ್ಲಿಯೋಕಾಡಿಯಮ್ ವಿವೆನ್ಸ್ ಇವುಗಳನ್ನು ಸಹ ಜೈವಿಕ ತಂತ್ರಜ್ನಾನದಿಂದ ವ್ರುದ್ದಿಸುವ ಪ್ರಯತ್ನಗಳು ನಡೆದಿವೆ.

ಜೆನಿಟಿಕ್ ತಂತ್ರಜ್ನಾನ ಜೈವಿಕ ನಿಯಂತ್ರಣೆ:

 ಒಂದು ಜೀವಿಯಲ್ಲಿನ ಜೀನನ್ನು ಇನ್ನೊಂದು ಜೀವಿಗೆ ವರ‍್ಗಮಾಡಿದರೆ ಅದಕ್ಕೆ ಕುಲಾಂತರಿ ಅತವಾ ಟ್ರಾನ್ಸ್‌ಜೇನಿಕ್ ಜೀವಿ ಎಂದು ಕರೆಯುತ್ತಾರೆ. ಜೀನ್ ಎಂಬುದು ವರ‍್ಣತಂತುವಿನಲ್ಲಿನ ಒಂದು ಬಾಗ. ಇದು ಜೀವಿಯಲ್ಲಿ ಒಂದು ನಿರ‍್ದಿಶ್ಟ ಗುಣವನ್ನು ರೂಪಿಸುತ್ತದೆ. ಇಂತಹ ಜೀನ್‌ಗಳನ್ನು ಬ್ಯಾಕ್ಟೀರಿಯಾದಿಂದ ಸಸ್ಯ, ಪ್ರಾಣಿ, ಅತವಾ ಸಸ್ಯದಿಂದ ಪ್ರಾಣಿ, ಬ್ಯಾಕ್ಟೀರಿಯಾಗಳಿಗೆ, ಅತವಾ  ಪ್ರಾಣಿಗಳಿಂದ ಇತರ ಪ್ರಾಣಿ, ಸಸ್ಯ ಅತವಾ ಬ್ಯಾಕ್ಟೀರಿಯಾಗಳಿಗೆ ವರ‍್ಗ ಮಾಡಬಹುದಾಗಿದೆ. ಹೀಗೆ ಕೀಟನಾಶಕ ಗುಣವನ್ನು ಸಸ್ಯಗಳಿಗೆ ಅಳವಡಿಸುವುದು ಸಾದ್ಯ ಮತ್ತು ಕೀಟನಾಶಕ ಪ್ರೋಟೀನನ್ನು ಸ್ರುಶ್ಟಿಸುವ ಬ್ಯಾಕ್ಟೀರಿಯಾದ ಜೀನನ್ನು ಬೇರ‍್ಪಡಿಸಿ ಸಸ್ಯಕ್ಕೆ ವರ‍್ಗ ಮಾಡಬಹುದಾಗಿದೆ.ಇಂತಹ ಕುಲಾಂತರಿ ಸಸ್ಯದ ಎಲೆ ಅತವಾ ಇತರ ಸಸ್ಯ ಬಗಗಳನ್ನು ತಿಂದ ಕೀಟವು ಸಾಯುತ್ತದೆ.ಇಲ್ಲಿ ಬ್ಯಾಕ್ಟೀರಿಯಾ ಮೂಲದ ಪ್ರೋಟೀನ್, ಸಸ್ಯ ಕೋಶಗಳಲ್ಲಿ ಸ್ರುಶ್ಟಿಯಾಗುತ್ತದೆ. ಹೀಗೆ ಸಸ್ಯಗಳಲ್ಲಿ ಕೀಟ ನಿರೋದಕ ಶಕ್ತಿಯನ್ನು ಅಳವಡಿಸಬಹುದು. ಇದೇ ರೀತಿಯಲ್ಲಿ ಸಸ್ಯಗಳಲ್ಲಿ ಹೆಚ್ಚು ಸಾರವುಳ್ಳ, ರುಚಿಕರವಾದ ಆಹಾರ ದಾನ್ಯಗಳನ್ನು ತಯಾರಿಸುವ ಜೀನ್‌ಗಳನ್ನು ಅಳವಡಿಸಬಹುದಾಗಿದೆ. ಇದೇ ವಿದಾನವನ್ನು ಅನುಸರಿಸಿ ಸಸ್ಯಗಳನ್ನು ಬೆಳೆಯಲಾಗುತ್ತಿದೆ. ವಿವಿದ ಪ್ರಬೇದಗಳ ಸಸ್ಯಗಳ ಕೋಶಗಳನ್ನು ಜತೆಗೂಡಿಸಿ ಸೊಮ್ಯಾಟಿಕ್ ಹೈಬ್ರಿಡ್ ಮಾಡುತ್ತಿದ್ದಾರೆ. ಈ ಸೊಮ್ಯಾಟಿಕ್ ಹೈಬ್ರಿಡ್ಗಳಲ್ಲಿ ಎರಡು ವಿವಿದ ಸಸ್ಯಗಳ ಜೀನುಗಳನ್ನು ಒಂದು ಕಡೆ ಸೇರಿಸಬಹುದಾಗಿದೆ. ಎಲ್ಲಾ ಸಸ್ಯ, ಪ್ರಾಣಿ ಮತ್ತು ಬ್ಯಾಕ್ಟೀರಿಯಾಗಳಲ್ಲಿ ಈ ಹೈಬ್ರಿಡ್ಗವಳನ್ನು ಮಾಡಬಹುದಾಗಿದೆ. ಇಂತಹ ಹೈಬ್ರಿಡ್ಗಮಳು ಕೀಟನಿರೋದಕ ಶಕ್ತಿ, ಹೆಚ್ಚು ಸಾರವುಳ್ಳ ಮತ್ತು ಹೆಚ್ಚು ಬೆಳೆಯುವ ಶಕ್ತಿಯನ್ನು ಗಳಿಸಿಕೊಂಡಿರುತ್ತವೆ.

ಬಿಟಿ ಕಾಟನ್ ಒಂದು ಕುಲಾಂತರಿ ಹತ್ತಿ ಸಸ್ಯ. ಈ ಹತ್ತಿ ಸಸ್ಯದಲ್ಲಿ ಬ್ಯಾಸಿಲಸ್ ತುರಿಂಜಿಯೆನ್ಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಬೇರ‍್ಪಡಿಸಿದ ಕೀಟ ನಿರೋದಕ ಪ್ರೊಟೀನನ್ನು ತಯಾರಿಸುವ ಜೀನನ್ನು ಅಳವಡಿಸಲಾಗಿದೆ. ಇಂತಹ ಹತ್ತಿ ಗಿಡ ಬಿಟಿ ಪ್ರೊಟೀನನ್ನು ತಯಾರಿಸುವ ಸಾಮರ‍್ತ್ಯವನ್ನು ಪಡೆದಿರುತ್ತದೆ. ಹತ್ತಿ ಬೆಳೆಯಲ್ಲಿ ಕಾಟನ್ ಬಾಲ್ವರ‍್ಮ್ಎಂಬ ಹುಳು ಹತ್ತಿಯ ಚೆಂಡು ತಯಾರಾಗುವಾಗ ಅದನ್ನು ತಿಂದು ಹತ್ತಿ ಬೆಳೆಯನ್ನು ನಾಶಗೊಳಿಸುತ್ತದೆ. ಇದೀಗ ಬಿಟಿ ಕಾಟನ್ ಬೆಳೆಸಿ ಕಾಟನ್ ಬಾಲ್ವರ‍್ಮ್ ಕಾಟವನ್ನು ತಪ್ಪಿಸಬಹುದಾಗಿದೆ. ಇಂತಹ ಬಿಟಿ ಹತ್ತಿಯನ್ನು ಕರ‍್ನಾಟಕದ 14 ವಿವಿದ ಕೇಂದ್ರಗಳಲ್ಲಿ ಬೆಳೆಯಲು ಸರ‍್ಕಾರವು ಇತ್ತೀಚೆಗೆ ಅನುಮತಿ ನೀಡಿದೆ. ಇದೇ ರೀತಿಯಲ್ಲಿ ಬಿಟಿ ಜೀನನ್ನು ಹೊಗೆಸೊಪ್ಪಿನ ಸಸ್ಯದಲ್ಲಿ ಅಳವಡಿಸಲಾಗಿದೆ. ಇದು ಸಹ ರೋಗ ನಿರೋದಕ ಶಕ್ತಿಯನ್ನು ಪಡೆದುಕೊಂಡಿದೆ. ಸಾಸಿವೆ ಗಿಡಗಳು ಬ್ಲೈಟ್ ಎಂಬ ರೋಗಕ್ಕೆ ತುತ್ತಾಗುತ್ತವೆ. ಬ್ಲೈಟ್ ರೋಗವು ಆಲ್ಟರ‍್ನೇಶರಿಯಾ ಎಂಬ ಬೂಶ್ಟಿನಿಂದ ಉಂಟಾಗುತ್ತದೆ. ಈ ರೋಗವನ್ನು ನಿಯಂತ್ರಿಸಲು ಅಗ್ರೋಬ್ಯಾಕ್ಟೀರಿಯಮ್ ಟ್ಯುಮಿಪೇಸಿಯನ್ಸ್ ಎಂಬ ಬ್ಯಾಕ್ಟೀರಿಯಾದ ಟಿ-ಡಿಎನ್ಎ ಯನ್ನು ಸಾಸಿವೆ ಗಿಡದಲ್ಲಿ ಅಳವಡಿಸಲಾಗಿದೆ.

ಜೈವಿಕ ಕೀಟನಾಶಕಗಳ ಮಹತ್ವ ?

ರಾಸಾಯನಿಕ ಕೀಟನಾಶಕಗಳನ್ನು ಸಂಯೋಜಿಸಿ, ಪರೀಕ್ಶೆಗೆ ಒಳಪಡಿಸಿ ಬಳಕೆಗೆ ಬಿಡುಗಡೆ ಮಾಡಲು ಸುಮಾರು 8ರಿಂದ 12 ವರ‍್ಶಗಳು ಬೇಕಾಗುತ್ತದೆ. ಆದರೆ ಜೈವಿಕ ಕೀಟನಾಶಕಗಳ ತಯಾರಿ ಮತ್ತು ಬಳಕೆಗೆ ಮೂರು ವರ‍್ಶಗಳು ಸಾಕು. ಈ ರಾಸಾಯನಿಕ ಕೀಟನಾಶಕಗಳ ಪರಿಣಾಮ ಕಡಿಮೆಯಾಗಿ ಮತ್ತೆ ಮತ್ತೆ ಬಳಸಬೇಕಾಗುತ್ತದೆ. ಆದರೆ ಜೈವಿಕ ಕೀಟನಾಶಕಗಳು ಒಮ್ಮೆ ಸಿಂಪಡಿಸಿದರೆ ಸಾಕು ಮತ್ತೊಮ್ಮೆ ಬಳಸುವ ಅಗತ್ಯವಿರುವುದಿಲ್ಲ.

ಅಂತಾರಾಶ್ಟ್ರೀಯ ಬತ್ತ ಸಂಶೋದನಾ ಕೇಂದ್ರ, ಪಿಲಿಪೈನ್ಸ್ನಿಂದ ಹೊರಡಿಸಿದ ಕಿರು ಪ್ರಕಟಣೆಯ ಪ್ರಕಾರ ಸುಮಾರು 800 ವಿವಿದ ಸ್ಪೀಶೀಸ್ಗಸಳ ಸ್ನೇಹಮಯಿ ಕೀಟಗಳನ್ನು ಬತ್ತ ಬೆಳೆಯುವ ಬೂಮಿಯಲ್ಲಿ ಅಳವಡಿಸಬಹುದು. ಅಂತಾರಾಶ್ಟ್ರೀಯ ಆಹಾರ ಮತ್ತು ವ್ಯವಹಾರ ಸಂಸ್ತೆಯ ಪ್ರಕಟಣೆಯ ಪ್ರಕಾರ ಸುಮಾರು 504 ವಿವಿದ ಕೀಟ ಸ್ಪೀಶೀಸ್ ಗಳು ರಾಸಾಯನಿಕ ಕೀಟನಾಶಕಗಳಿಗೆ ನಿರೋದಕ ಶಕ್ತಿಯನ್ನು ಪಡೆದುಕೊಂಡಿವೆ. ರೋಗಬಾದೆಗಳನ್ನು ತಪ್ಪಿಸಲು ಸೂಕ್ತವಾದ ಎರಡು ಅತವಾ ಮೂರು ವಿದಾನಗಳನ್ನು ಬಳಸುವುದು ಒಳ್ಳೆಯದೆಂದು ರೈತರಲ್ಲಿ ಮನವರಿಕೆ ಮಾಡಬೇಕಾಗಿದೆ.

(ತಿಟ್ಟಸೆಲೆ: seedbuzz.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: