ಕವಿತೆ: ಚೈತನ್ಯ

– ಕಾಂತರಾಜು ಕನಕಪುರ.

nature

ಮಳೆಯಲಿ ತೋಯ್ದು
ಹಸಿರುಟ್ಟು ನಿಂತ
ಬೆಟ್ಟದ ಸಾಲುಗಳ
ಒಡಲಲ್ಲಿ ಬವ್ಯ ರೂಪಿ

ಹಸಿರೆಲೆಯ ತೆರೆಗಳ
ನಡುವೆ ತಲೆ ಎತ್ತಿನಿಂತ
ಬಣ್ಣದ ಹೂವಿನ
ಪಕಳೆಯಲ್ಲಿ ರಮ್ಯ ರೂಪಿ

ಎದೆ ಹಾಲುಂಡು
ತಾಯ ಮಡಿಲಿನಲಿ
ಮಲಗಿರುವ ಮಗುವಿನ
ಮೊಗದಲ್ಲಿ ದಿವ್ಯ ರೂಪಿ

ಬೇಗೆಯ ನಡುವೆ
ತೀಡುವ ತಂಗಾಳಿಯ ಹಾಗೆ
ಹಾಡುವ ಕವಿಯ
ಎದೆಯಲ್ಲಿ ಕಾವ್ಯ ರೂಪಿ

ಸದಾ ಗುಪ್ತಗಾಮಿನಿಯಾಗಿ
ಹರಿಯುತಲಿರುವ
ಬದಲಾವಣೆಯ ತೊರೆಯ
ಸೆಳವಿನಲ್ಲಿ ನವ್ಯ ರೂಪಿ

(ಚಿತ್ರ ಸೆಲೆ: stuartwilde.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Lokesh says:

    ಅದ್ಭುತ ವಾಗಿದೆ ಅಣ್ಣಯ್ಯ

ಅನಿಸಿಕೆ ಬರೆಯಿರಿ:

%d bloggers like this: