ಕವಿತೆ: ಮೌನ ಮಾತಾಗಿದೆ

– ಕಿಶೋರ್ ಕುಮಾರ್.

ಮೌನವೇ ಮನದ ಮಾತಾಗಿದೆ
ಮಾತಾಡಲು ಇನ್ನೇನಿಲ್ಲ
ಆಕ್ರಂದನ ಮುಗಿಲ ಮುಟ್ಟಿದೆ
ಕೇಳಲು ನೀನೇ ಜೊತೆಗಿಲ್ಲ

ನೋವುಂಡು ನಾ ಕುಳಿತಿರುವೆ
ನೋವ ನೀಡಿ ನೀ ಹೊರಟಿರುವೆ
ಪ್ರತಿ ಗಳಿಗೆಯು ನಿನ್ನ ನೆನೆದಿರುವೆ
ನೀನಂತೂ ಲೆಕ್ಕಿಸದೆ ಹೊರಟಿರುವೆ

ಮರುಬೂಮಿ ಮನಕೆ ನೀರೆರೆದು
ಒಲವೆಂಬ ಸಸಿಯ ನೆಟ್ಟು
ಹೇಳದೇ ಕೇಳದೇ ಹೊರಟೆ
ಬದುಕಿಗಾಗುವಶ್ಟು ನೋವ ಕೊಟ್ಟು

ಹೇಳದೆ ಕೇಳದೆ ಬದುಕಿಗೆ ಬಂದು
ಹೇಳಿದೆ ನಾವಿಬ್ಬರೂ ಒಂದು
ನನ್ನ ಬಿಟ್ಟು ಹೊರಟಿರುವೆ ಇಂದು
ಗೋಗರೆಯುವೆ ಹೇಳು ನನ್ನ ತಪ್ಪೇನೆಂದು

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *