ಕವಿತೆ : ಇಚ್ಚಾ ಮರಣಿ

ವಿನು ರವಿ.

ಬೀಶ್ಮ, Bhishma

ಕಣ್ಣಿಗೆ ಬೀಳುವ ಸುಂದರ
ಕುವರಿಯರ ಅಂತಹಪುರದಲಿ
ತಂದಿರಿಸಿ ಮೀಸೆ ತಿರುವುತ
ಬೋಗದಲಿ ಮೈಮರೆತು ಮೆರೆವ
ರಾಜರ ನಡುವೆ ಇವನು
ಆಜನ್ಮ ಬ್ರಹ್ಮಚಾರಿ

ಕುಲದ ಪ್ರತಿಶ್ಟೆ ಬೆಳೆಸಲು
ಪರಾಕ್ರಮದಿ ಜಯಿಸಿ
ತಂದ ಅಬಲೆಯರ
ಮನಸಿನಾಳವ ಅರಿಯದೆ
ಕೋಪಾಗ್ನಿಗೆ ಗುರಿಯಾದ ಇವನು
ಶಾಪಗ್ರಸ್ತ

ಕಣ್ಮುಂದೆಯೇ ಕುಲನಾರಿಯ
ದುರುಳರು ಅಪಮಾನಿಸಿ
ಅಟ್ಟಹಾಸವು ಕೇಕೆ ಹಾಕಿ
ನಗುವಾಗ ಇವನು
ಸ್ತಿತಪ್ರಜ್ನ

ಕಾಲ ಎಸೆದಾ ದಾಳಗಳ
ದಾಳಿಗೆ ಸಿಲುಕಿ ಅಹಂಕಾರವು
ಬಳಲುವಾಗ ಮಹಾಸಂಗ್ರಾಮದಲಿ
ರಕ್ತದ ಕಲೆಗಳು ಮೆತ್ತಿದ
ಶರಶಯ್ಯೆಯಲಿ ವಿರಮಿಸಿದ ಇವನು
ಇಚ್ಚಾ ಮರಣಿ

( ಚಿತ್ರಸೆಲೆ : wikipedia )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: