ಕವಿತೆ: ಕಳಚಬೇಕು ಆಸೆಯ ಪದರ
– ವಿನು ರವಿ.
ಅದಶ್ಟು ಸುಲಬವಾಗಿತ್ತೆ
ಎಲ್ಲವನು ತೊರೆದು
ನಡೆದು ಹೋದದ್ದು
ಅರಮನೆಯ ಬದುಕು
ಮೊಗೆ ಮೊಗೆದು ಕೊಟ್ಟಿರಲಿಲ್ಲವೆ
ಪ್ರೀತಿ ಸಂತ್ರುಪ್ತಿ
ಅಂತಪುರದಾಚೆಗಿನ
ಅದಾವ ನೋವು ಸಾವು
ಅಂತರಂಗದ ಕದವ ತೆರೆದು ಹೋಯಿತು
ಅದಮ್ಯವಾಗಿ ಕಾಡಿದ ಚಿಂತೆ
ಕಾಡು ಮೇಡು ಅಲೆಯುವಂತೆ ಮಾಡಿತೆ
ಅಲ್ಲಿ ಇಲ್ಲಿ ಎಲ್ಲೆಲ್ಲೊ ಹುಡುಕಿ
ಅಂತೂ ಅಂತರಂಗದೊಳಗೆ
ಒಂದು ದಿನ ಹುಟ್ಟಿತೆ ಉತ್ತರ
ಪರಮ ಸಾಕ್ಶಾತ್ಕಾರ
ಬದುಕಾಗಲು ಸರಳ ಸುಂದರ
ಕಳಚಬೇಕು ಆಸೆಯ ಪದರ
(ಚಿತ್ರ ಸೆಲೆ: mindfulmuscle.com)
ಇತ್ತೀಚಿನ ಅನಿಸಿಕೆಗಳು